Breaking News

ತಾಯಿಯ ಆಧಾರ ಅಣ್ಣನ ಸಹಕಾರ  ದ್ವಿತೀಯ ಪಿಯುಸಿ  ಸಾಧನೆ ತೋರಿದ ವಿಶ್ವದರ್ಶನ ಕಾಲೇಜು ವಿದ್ಯಾರ್ಥಿನಿ ಲಕ್ಷ್ಮೀ ಜನ್ನು ಪಾಂಡ್ರಮಿಸೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ

ಯಲ್ಲಾಪುರ : ತಂದೆಯಿಲ್ಲದೆ ತಾಯಿಯ ಆಧಾರ ಹಾಗೂ ಅಣ್ಣನ ಬಲದಲ್ಲಿ ಬಡತನದ ಬೇಗೆಯಿದ್ದರೂ ಛಲ ಬಿಡದೇ ಓದಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.91.5% (549) ಅಂಕ ಗಳಿಸಿದ ತಾಲೂಕಿನ ಖಾರೇವಾಡ ನಿವಾಸಿ ಪಟ್ಟಣದ ವಿಶ್ವದರ್ಶನ ಪಿಯು ಕಾಲೇಜಿನ ಲಕ್ಷ್ಮೀ ಜನ್ನು ಪಾಂಡ್ರಮಿಶೆ ಸಾಧನೆ ಮಾಡಿದ್ದಾಳೆ.


ಪಟ್ಟಣದ ವಿಶ್ವದರ್ಶನ ಕಾಲೇಜಿನಲ್ಲಿ ಶಿಕ್ಷಕರ ಮಾರ್ಗದರ್ಶನದಲ್ಲಿ ಉತ್ತಮ ಅಂಕ ಗಳಿಸಿದ ಕುವರಿ ದನಗರ ಗೌಳಿ ಸಮಾಜದ ಹೆಣ್ಣುಮಗಳಾಗಿ ಸಮಾಜಕ್ಕುಕಲಿತ ಶಾಲೆಗು ಕೀರ್ತಿ ತಂದಿದ್ದಾಳೆ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿಯವರೆಗೆ ವ್ಯಾಸಂಗ ಮಾಡಿ ಅಲ್ಲಿಯೂ 92% ಪ್ರತಿಶತ ಅಂಕ ಪಡೆದು ಬಡತನ ವಿದ್ಯೆಗೆ ಅಡ್ಡಿಯಾಗದು ಕಲಿಯುವ ಶ್ರದ್ದೆ ಸಾಧಿಸುವ ಛಲವಿರಬೇಕು ಎಂಬುದನ್ನು ತೋರಿಸಿದ್ದಾಳೆ.

ತಾಲೂಕಿನ ಖಾರೆವಾಡಾದ ಜನ್ನು ಬಾಬು ಪಾಂಡ್ರಮಿಶೆ ಹಾಗೂ ಸರಿತಾ ಜನ್ನು ಪಾಂಡ್ರಮಿಶೆಯವರ ಮಗಳಾಗಿದ್ದು ಮುಂದೆ ಉನ್ನತ ವಿದ್ಯಾಭ್ಯಾಸ ಮಾಡುವ ಗುರಿ ಹೊಂದಿದ್ದಾಳೆ. ಈಕೆಯ ಸಾಧನೆಗೆ ದನಗರ ಗೌಳಿ ಸಮಾಜದಿಂದ ಪ್ರಶಂಸೆ ವ್ಯಕ್ತವಾಗಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ಪಟ್ಟಣ ಪಂಚಾಯತ  ನಿಧಿ ಖೋತಾ – ಹಿರಿಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ – ಸೋಮೇಶ್ವರ ನಾಯ್ಕ್ ಆಗ್ರಹ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದ ಮೀನು ಮತ್ತು ಮಾಂಸ ಮಾರುಕಟ್ಟೆಯ …

Leave a Reply

Your email address will not be published. Required fields are marked *