
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ತಾಲ್ಲೂಕಿನ ಕ್ರಿಯಾಶೀಲ ಸಂಘಟನೆಯಲ್ಲಿ ಒಂದಾದ ಪಟ್ಟಣದ ಲಯನ್ಸ ಕ್ಲಬ್ ನೂತನ ಪದಾಧಿಕಾರಿ ಮಂಡಳಿ ಅಸ್ತಿತ್ವಕ್ಕೆ ತರಲಾಗಿದೆ.

ಅರಣ್ಯ ಇಲಾಖೆಯಲ್ಲಿ ಸೇವೆಸಲ್ಲಿಸಿ ನಿವೃತ್ತಿ ಯಾದ ನಂತರ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿದ್ದು ನಿವೃತ್ತ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಹಾಗು ತಾಲೂಕು ಪ್ರಮುಖರಾಗಿ ಸೇವೆ ಸಲ್ಲಿಸುತ್ತಿರುವ ಸುರೇಶ ಬೋರ್ಕರ್ ವರನ್ನು ಪ್ರತಿಷ್ಠಿತ ಸಂಸ್ಥೆ ಯಲ್ಲಿ ಒಂದಾದ ಲಯನ್ಸ್ ಕ್ಲಬ್ ಯಲ್ಲಸಪುರದ ನೂತನ ಅಧ್ಯಕ್ಷ ರಾಗಿ ಆಯ್ಕೆ ಮಾಡಿದ್ದು ಕಾರ್ಯದರ್ಶಿಯಾಗಿ ಎನ್ ಎ.ಭಟ್ , ಖಜಾಂಚಿಯಾಗಿ ಶೇಷಗಿರಿ ಪ್ರಭು ಆಯ್ಕೆಗೊಂಡಿರುತ್ತಾರೆ
ಪದಗ್ರಹಣ ಸಮಾರಂಭನ್ನು ಪಟ್ಟಣದ ಪೊಲೀಸ್ ಠಾಣೆ ಮುಂಬಾಗದ ನೂತನ ಹೊಟೆಲ್ ಶ್ರೀರಾಮ್ ರೆಸಿಡೆನ್ಸಿ ಯಲ್ಲಿ ದಿನಾಂಕ 15 ರಂದು ಹಮ್ಮಿಕೊಳ್ಳಲಾಗಿದೆ ಕಾರ್ಯಕ್ರಮದಲ್ಲಿ ಪದಗ್ರಹಣಾಧಿಕಾರಿಯಾಗಿ ಪಿಎಮ್ಜೆಎಫ್ Ln ಗಣಪತಿ ಎನ್ ನಾಯ್ಕ್, (ಪೋಸ್ಟ್ ಡಿಸ್ಟ್ರಿಕ್ಟ್ ಗೌರ್ನರ್) ಝೋನಲ್ ಚೇರ್ ಪರ್ಸನ್ Ln ಆರ್.ಹೆಚ್. ನಾಯಕ್ , ಪಾಲ್ಗೊಂಡು ನೂತನ ಪದಾಧಿಕಾರಗಳಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.
Prathidvani Yellapura