





ಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕಿನ ಕಿರವತ್ತಿ ಪಂಚಾಯತ್ ವ್ಯಾಪ್ತಿಯ ಸೋಮಾಪುರದ ಹೊಲದಲ್ಲಿ ಕೆಲಸ ಮಾಡುವ ವೇಳೆ ಸಿಡಿಲು ಬಡಿದಿದ್ದು ಸಹೋದರರಿಬ್ಬರು ಸಿಡಿಲ ಹೊಡೆತಕ್ಕೆ ಸಿಲುಕಿದರು ಸಾವಿನ ದವಡೆಯಿಂದ ಪಾರಾಗಿ ಬಂದ ಘಟನೆ ರವಿವಾರ ಸಂಜೆ ನಡೆದಿದೆ.


ಗಣಪತಿ ಕೃಷ್ಣ ಮಿರಾಶಿ ( 32 ) ಮತ್ತು ತಮ್ಮ ಅನಂತನಾಗ್ ಕೃಷ್ಣ ಮಿರಾಶಿ ( 30 ) ಎಂಬ ಸಹೋದರರು ಸೋಮಾಪುರದ ತಮ್ಮ ಹೊಲದಲ್ಲಿ ಕೆಲಸ ಮಾಡುವ ವೇಳೆ ಏಕಾಏಕಿ ಸಿಡಿಲು ಬಡಿದಿದ್ದು ಅಣ್ಣ ಗಣಪತಿಗೆ ಪಕ್ಕೆ ಭಾಗದಲ್ಲಿ ಬರೆ ಮೂಡಿದ್ದು ಕಾಲಿನ ಮೇಲಿನ ರೋಮವೆಲ್ಲ ಸುಟ್ಟಿದೆ ತಮ್ಮ ಅನಂತ್ ಕಾಲಿಗೆ ಪೆಟ್ಟಾಗಿದ್ದು ಯಾವುದೆ ಅಹಿತಕರ ಘಟನೆ ಸಂಭವಿಸದಿರುವುದು ಪವಾಡ ಎಂಬಂತಾಗಿದೆ.
ಸದ್ಯ ಯಲ್ಲಾಪುರ ಸರ್ಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಿದ್ದು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಗೆ ಸೂಚಿಸಲಾಗಿದೆ.

ಸಿಡಿಲು ಬಡಿದ ವಿಷಯ ತಿಳಿಯುತ್ತಲೆ ಯಲ್ಲಾಪುರ ಸರ್ಕಾರಿ ಆಸ್ಪತ್ರೆಯ 108 ಆ್ಯಂಬುಲೆನ್ಸ್ ತಕ್ಷಣ ಸ್ಥಳಕ್ಕೆ ಧಾವಿಸಿ ಸಿಡಿಲು ಬಡಿತಕ್ಕೆ ಸಿಲುಕಿದ ಸಹೋದರರನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ತಲುಪಿಸಿದ್ದು ಚಾಲಕ ಅನಿಲ್ ನಾಯ್ಕ್ ಹಾಗು ಕಿರವತ್ತಿ ಪಂಚಾಯತ್ ಸದಸ್ಯ ರಹಮತ್ ಅಬ್ಬಿಗೆರೆ ಕಾರ್ಯವನ್ನು ಗ್ರಾಮಸ್ಥರು ಶ್ಲಾಘಿಸಿದ್ದಾರೆ.
Prathidvani Yellapura