
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಕಟ್ಟೆಗೆ ಕವಳ ತಿಂದು ಉಗಿದು ಅಪಮಾನ ಮಾಡಿರುವ ಘಟನೆಯ ಕುರಿತು ತೊಗಲು ಹರಳಯ್ಯ ಟ್ರಸ್ಟ್ ಅಧ್ಯಕ್ಷ ಜಗನ್ನಾಥ ರೇವಣ್ಕರ್ ಖಂಡಿಸಿ ಹೋರಾಟದ ಎಚ್ಚರಿಕೆ ನೀಡಿದ ಸುದ್ದಿಯನ್ನು ಪ್ರತಿಧ್ವನಿ ಯಲ್ಲಾಪುರ ನ್ಯೂಸ್ ತಕ್ಷಣದಲ್ಲೇ ಪ್ರಕಟಿಸಿತ್ತು.

ಇದಕ್ಕೆ ಸ್ಪಂದಿಸಿದ ಪಟ್ಟಣ ಪಂಚಾಯತ ತಕ್ಷಣಕ್ಕೆ ಅಂಬೇಡ್ಕರ್ ಕಟ್ಟೆ ತೊಳೆದು ಶುಚಿಗೊಳಿಸಿದ್ದಾರೆ.
ತೊಗಲು ಹರಳಯ್ಯ ಟ್ರಸ್ಟ್ ಅಧ್ಯಕ್ಷ ಜಗನ್ನಾಥ ರೇವಣ್ಕರ್ ಮುಂದೆ ನಿಂತು ಪಟ್ಟಣ ಪಂಚಾಯತ ಆರೋಗ್ಯ ನಿರೀಕ್ಷಕ ಗುರು ನೇತೃತ್ವದಲ್ಲಿ ಪೌರಕಾರ್ಮಿಕರ ಸಹಾಯದಲ್ಲಿ ಅಂಬೇಡ್ಕರ್ ಕಟ್ಟೆ ತೊಳೆಯಲಾಯಿತು. ಸುದ್ದಿಗೆ ಸ್ದಂದಿಸಿ ಕಟ್ಟೆ ಶುಚಿಗೊಳಿಸಿದ ಪಟ್ಟಣ ಪಂಚಾಯತಕ್ಕೆ ಪ್ರತಿಧ್ವನಿ ವಂದನೆ ಸಲ್ಲಿಸಿದೆ.

ಅಂಬೇಡ್ಕರ್ ಕಟ್ಟೆಗೆ ಅಪಮಾನ ಸಹಿಸಲಾಗದೆ ತೊಳೆಸಿದ್ದೇನೆ ಹೊರತು ಪ್ರಕರಣ ಬಗೆಹರಿದಿಲ್ಲ. ಅಂಬೇಡ್ಕರ್ ವೃತ್ತದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಸಿಸಿ ಟಿ.ವಿ ಅಳವಡಿಸಿದ್ದು ಗುರುವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಅಂಬೇಡ್ಕರ್ ಕಟ್ಟೆಗೆ ಕವಳ ಉಗುಳಿದ ವ್ಯಕ್ತಿ ಯಾರೆಂದು ಪತ್ತಹಚ್ಚಿ ಆತನಮೇಲೆ ಕ್ರಮ ಜರುಗಿಸಬೇಕು. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಕಟ್ಟೆಗೆ ಅವಮಾನಿಸಿದ ತಪ್ಪಿಗಾಗಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಇಲ್ಲವಾದಲ್ಲಿ ಹೋರಾಟ ಅನಿವಾರ್ಯವಾಗಲಿದೆ. ದಲಿತ ಸಂಘಟನೆಗಳು ಈ ಪ್ರಕಾರವನ್ನು ಲಘುವಾಗಿ ಪರಿಗಣಿಸದೆ ಗಂಭೀರವಾಗಿ ಪರಿಗಣಿಸಿದೆ ಎಚ್ಚರಿಕೆ.
ಜಗನ್ನಾಥ ರೇವಣ್ಕರ್
ಅಧ್ಯಕ್ಷರು, ತೊಗಲು ಹರಳಯ್ಯ ಟ್ರಸ್ಟ್, ಯಲ್ಲಾಪುರ




Prathidvani Yellapura