Breaking News

ವರ್ಷದ ಸೇವೆಯ ಸಾರ್ಥಕ ಬಾವ ; ಲಯನ್ಸ್ ಕ್ಲಬ್ ಅಧ್ಯಕ್ಷ ಸುರೇಶ್ ಬೋರಕರ್ ಲಯನ್ಸ್ ಪಯಣ.


ಪ್ರತಿಧ್ವನಿ ಯಲ್ಲಾಪುರ : ಸೇವಾಭಾವದ ವಿಶ್ವ ಖ್ಯಾತಿಯ ಸಂಸ್ಥೆ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಲಯನ್ ಸುರೇಶ್ ಬೋರ್ಕರ್ ವರ್ಷಪೂರ್ಣಗೊಳಿಸಿ ನಿರ್ಗಮಿಸುತ್ತಿದ್ದು ಸಲ್ಲಿಸಿದ ಸೇವೆಯ ಸಾರ್ಥಕ ಕ್ಷಣಗಳಿಗೆ ವಂದಿಸಿದ್ದಾರೆ.


2023-24 ನೇ ಸಾಲಿನ “ಲಯನ್ಸ್ ಕ್ಲಬ್ ಯಲ್ಲಾಪುರ ಘಟಕ”ಕ್ಕೆ ಕ್ರಿಯಾಶೀಲ ವ್ಯಕ್ತಿತ್ವದ ಸೇವಾಭಾವನೆಯ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸುರೇಶ್ ಬೋರಕರ ಅಧ್ಯಕ್ಷರಾಗಿ ಪ್ರಮಾಣ ಸ್ವೀಕರಿಸಿ ಸೇವಾಕ್ಷೇತ್ರದಲ್ಲಿ ಕಾರ್ಯಪ್ರವೃತ್ತರಾದರು. ಸುರೇಶ್ ಬೋರಕರ್ ಅವರಿಗೆ ಸಮಾಜಸೇವೆ ಹೊಸದೇನೂ ಆಗಿರಲಿಲ್ಲ. ಕಾರಣ ತಾವು ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲೇ ಸಮಾಜಮುಖಿ ಕಾರ್ಯಗಳೆಡೆಗೆ ಮುಖಮಾಡಿ ತಮ್ಮ ಕೈಲಾದ ಸಾಮಾಜಿಕ ಸೇವೆಯನ್ನು ಸಲ್ಲಿಸುತ್ತಿದ್ದರು. ನಿವೃತ್ತಿ ನಂತರ ಮನೆಯೊಳಗೆ ಕೂರದೇ ಮತ್ತಷ್ಟು ಕ್ರಿಯಾಶೀಲರಾಗಿ ಸಮಾಜದಲ್ಲಿ ಬೆರೆತು ಹಲವು ಕ್ಷೇತ್ರಗಳಲ್ಲಿ ತಮ್ಮ ಚಾಪನ್ನು ಮೂಡಿಸಲು ಪ್ರಾರಂಭಿಸಿದ ಫಲವೇ ಪ್ರತಿಷ್ಠಿತ ಸಂಸ್ಥೆ ಲಯನ್ಸ್ ಕ್ಲಬ್ ಯಲ್ಲಾಪುರ ಘಟಕಕ್ಕೆ ಅಧ್ಯಕ್ಷರಾಗಿದ್ದು.
ಅಧ್ಯಕ್ಷರಾಗುತ್ತಲೇ ಸುಮ್ಮನೆ ದಿನಕಳೆಯದೇ ಸೇವಾಕಾರ್ಯಕ್ಕೆ ಚಾಲನೆ ನೀಡಿದರು.


• ಪಟ್ಟಣದ ಕಾಳಮ್ಮನಗರದಲ್ಲಿರುವ ಸ.ಹಿ.ಪ್ರಾ.ಶಾಲಾ ಆವರಣದಲ್ಲಿ ಲಯನ್ಸ್ ಸದಸ್ಯರ ಸಹಕಾರದೊಂದಿಗೆ ಸಸಿಗಳನ್ನು ನೆಡುವುದರ ಮೂಲಕ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಜಾಗೃತಗೊಳಿಸುವ ಕಾರ್ಯ ಮಾಡಿದರು.
• ವೆಂಕಟರಮಣ ಮಠದಲ್ಲಿ ಪ್ರತಿವರ್ಷದಂತೆ ಲಯನ್ಸ್ ಕ್ಲಬ್ ಅಡಿಯಲ್ಲಿ ನಡೆಸುವ ರಾಧಾಕೃಷ್ಣ ಸ್ಪರ್ಧೆ ಆಯೋಜಿಸಿ ಯಶಸ್ವಿಗೊಳಿಸಿದರು.
• ಗುರುಗಳನ್ನು ಗೌರವಿಸುವ ಸತ್ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.
• ವಿಠ್ಠಲ ವನವಾಸಿ ವಸತಿ ನಿಲಯದಲ್ಲಿರುವ ಬಡ ಮಕ್ಕಳಿಗೆ ಅತ್ಯಾವಶ್ಯಕ ಅಗತ್ಯ ಆಹಾರ ವಸ್ತುಗಳನ್ನು ವಿತರಿಸಲಾಯಿತು.
• ಅನಾಥಾಶ್ರಮದಲ್ಲಿ ಆಶ್ರಯ ಪಡೆದ ವೃದ್ಧರಿಗೆ , ಮಕ್ಕಳಿಗೆ ಊಟ ನೀಡಿ ಚಾದರ್ ವಿತರಿಸಿದರು.
• ಕಿರವತ್ತಿಯಲ್ಲಿ ರಕ್ತದಾನ ಶಿಬಿರ ನಡೆಸಿ ಯಶಸ್ವಿಗೊಳಿಸಲಾಯಿತು.
• ಕುಮಟಾದ ಲಯನ್ ರೇವಣಕರ ಚಾರಿಟಬಲ್ ಕಣ್ಣಿನ ಆಸ್ಪತ್ರೆ ಮತ್ತು ಇನ್ನಿತರ ಆರೋಗ್ಯ ಸಂಸ್ಥೆಗಳ ಸಹಯೋಗದಲ್ಲಿ ಯಲ್ಲಾಪುರದ ಅಡಿಕೆ ಭವನದಲ್ಲಿ ಕಣ್ಣಿನಪೊರೆ ಉಚಿತ ತಪಾಸಣೆ ಮುತ್ತು ಉಚಿತ ಶಸ್ತ್ರಚಿಕಿತ್ಸಾ ಶಿಬಿರವನ್ನು ನಡೆಸಿ 13 ಜನರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಲಾಯಿತು.
• ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಯಕ್ಷಗಾನ ಕಲಾವಿದ, ನಾಟಿ ವೈದ್ಯ , ಆಯುರ್ವೇದ ವೈದ್ಯ ಹಾಗೂ ನಿವೃತ್ತ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸಲಾಯಿತು.
• ತಾಲೂಕಿನ ಸ್ನೇಹಸಾಗರ ಶಾಲೆಯಲ್ಲಿ ನಡೆದ ದ್ವಜಾರೋಹಣ ಹಾಗೂ ವಿವಿಧ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಲ್ಲಿ ಸಪೂರ್ತಿ ತುಂಬುವ ಕಾರ್ಯ ಮಾಡಲಾಯಿತು.
• ಲಯನ್ಸ್ ಕ್ಲಬ್‌ನ ವಿವಿಧ ಹಂತದ ಸಭೆ, ಸಮಾರಂಭ ಇನ್ನಿತರೆ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಲ್ಲದೇ ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಉತ್ತಮ ಘಟಕ ಪ್ರಶಸ್ತಿಯನ್ನೂ ಪಡೆಯಲಾಯಿತು.

ಹೀಗೆ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಾ ಸರ್ಕಾರದಿಂದ ಆಯೋಜಿಸುವ ರಾಷ್ಷ್ರೀಯ ಹಬ್ಬಗಳಲ್ಲಿ ಕನ್ನಡಪರ ಕಾರ್ಯಕ್ರಮಗಳಲ್ಲಿ ಸಾರ್ವಜನಿಕ ಉಪಯೋಗ ಶಿಬಿರಗಳಲ್ಲಿ ಸಂಘಸಂಸ್ಥೆಗಳ ಸೇವಾಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಸುರೇಶ್ ಬೋರಕರ ಅಧ್ಯಕ್ಷರಾದ ನಂತರ ಸಾರ್ವಜನಿಕರಿಗೆ ಇನ್ನಷ್ಟು ಹತ್ತಿರವಾದರು. ಇದೀಗ ತಮ್ಮ ಅಧ್ಯಕ್ಷತೆಯ ಅವಧಿ ವರ್ಷ ಪೂರ್ಣಗೊಂಡಿದ್ದು ಹೊಸ ಆಡಳಿತ ಮಂಡಳಿಗೆ ಸ್ವಾಗತಿಸಿ ಸಾರ್ಥಕ ಭಾವದಿಂದಲೇ ನಿರ್ಗಮಿಸುತ್ತಿದ್ದಾರೆ. ಸದಾ ಸೇವೆಯ ಭಾವದಲ್ಲಿರುವ ಸುರೇಶ್ ಬೋರಕರ ಮುಂದೆಯೂ ಲಯನ್ಸ್ ಕ್ಲಬ್ ಘಟಕದ ಎಲ್ಲ ಕಾರ್ಯಕ್ರಮಗಳಲ್ಲಿ ಮಾರ್ಗದರ್ಶನ ಮಾಡುತ್ತಾ ಮತ್ತಷ್ಟು ಉತ್ತಮ ಕಾರ್ಯಗಳಿಗೆ ಅಣಿಯಾಗಲಿದ್ದಾರೆ.

ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುವ ದಿನಗಳಲ್ಲೇ ಸಮಾಜದೊಂದಿಗೆ ಬೆರೆತು ಕೈಲಾದ ಸೇವೆ ಸಲ್ಲಿಸುವ ಕಾತರತೆ ಕಾಡುತ್ತಿತ್ತು. ನಿವೃತ್ತಿ ಹೊಂದುತ್ತಲೇ ಸಮಯ ವ್ಯರ್ಥ ಮಾಡದೇ ಸಮಾಜದೊಂದಿಗೆ ಬೆರೆಯಬೇಕೆಂಬ ಹಂಬಲಕ್ಕೆ ಲಯನ್ಸ್ ಕ್ಲಬ್ ಯಲ್ಲಾಪುರ ಘಟಕ ದಾರಿ ಮಾಡಿಕೊಟ್ಟಿತು. ಕೊಟ್ಟ ಅಧ್ಯಕ್ಷ ಗಾದಿಯ ಜವಾಬ್ದಾರಿಯನ್ನು ನಿಷ್ಕಲ್ಮಷವಾಗಿ ನಿರ್ವಹಿಸಿದ್ದು ಸಹಕರಿಸಿದ ಎಲ್ಲ ಪದಾಧಿಕಾರಿಗಳು, ಸದಸ್ಯರಿಗೂ , ಊರನಾಗರೀಕರಿಗೂ , ಸಂಘ ಸಂಸ್ಥೆಗಳಿಗೂ, ವಿವಿದ ಇಲಾಖೆಯ ಅಧಿಕಾರಿಗಳಿಗೂ ಆಭಾರಿಯಾಗಿದ್ದೇನೆ. – ಸುರೇಶ್ ಬೋರಕರ, ಲಯನ್ಸ್ ಅಧ್ಯಕ್ಷ

ನೂತನ ಪದಾಧಿಕಾರಿ ಮಂಡಳಿಯ ಪದಗ್ರಹಣ ಸಮಾರಂಭ ದಿನಾಂಕ 13-7-2024 ರಂದು ಶನಿವಾರ ಸಂಜೆ 5-30 ಕ್ಕೆ ಅಡಿಕೆ ಭವನದಲ್ಲಿ ಜರುಗುತ್ತಿದ್ದು ಸರ್ವರಿಗು ಗೌರವದಿಂದ ಸ್ವಾಗತಿಸುತ್ತ ಯಲ್ಲಾಪುರ ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳಿಗೆ ಶುಭಕೋರುತ್ತೇನೆ. – ಸುರೇಶ್ ಬೋರ್ಕರ್ ಯಲ್ಲಾಪುರ ಲಯನ್ಸ್ ಕ್ಲಬ್ ಅಧ್ಯಕ್ಷರು

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ಪೊಲೀಸರ ಕಾರ್ಯ ಕ್ಷಮತೆ – ವರ್ಷದ ಹಿಂದಿನ ಡಕಾಯಿತಿ ಪ್ರಕರಣ ಆರೋಪಿಗಳು ಸ್ವತ್ತಿನ ಸಹಿತ ಅಂದರ್.!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ …

Leave a Reply

Your email address will not be published. Required fields are marked *