
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ – ಕಲಾಲೋಕದಲ್ಲಿ ಇಂದಿಗು ತನ್ನ ಶ್ರೇಷ್ತೆಗೆ, ಪಾವಿತ್ರತೆಗೆ,ಧರ್ಮ ಪರಂಪರೆಗೆ ಕಿಂಚಿತ್ತು ಚ್ಯುತಿ ಬಾರದಂತೆ ಸಾತ್ವಕತೆಯ ಕಾಪಿಟ್ಟು ಮುಂದಿನ ಪೀಳಿಗೆಗು ಕಲೆಯ ವರ್ಗಾವಣೆ ಮಾಡುವ ನಿಟ್ಟಿನಲ್ಲಿ ಕಲಾಧರ್ಮ ಶ್ರಮದಲ್ಲಿರುವುದೆ ದೈವ ಕಲೆಯಾದ ” ಯಕ್ಷಗಾನ “ ಕಲೆ.
ಅಚ್ಚ ಕನ್ನಡದ ಕನ್ನಡ ಹೊರತು ಬೇರಾವ ಭಾಷೆಯ ಲೇಪನವೆ ಇಲ್ಲದೆ ಇಂದಿಗು ಕೋಟ್ಯಾಂತರ ಜನರನ್ನ ಆಕರ್ಷಿಸುತ್ತ ಸಾವಿರಾರು ಕಲಾವಿದರನ್ನು ಬೆಳೆಸುತ್ತ ಲಕ್ಷಾಂತರ ಜನರ ಜೀವನ ನಿರ್ವಹಣೆಯ ದಾರಿದೀಪವಾಗಿ ನೂರಾರು ಸಂಘಟಕರಿಗೆ ಆರ್ಥಿಕ ಬಲ ತುಂಬಿ ಮುನ್ನುಗುತ್ತಿರುವ ಯಕ್ಚಗಾನವನ್ನು ನೋಡಿ ನಲಿದು ಸಂಭ್ರಮಿಸಿ ಕೈ ಬಿಟ್ಟರೆ ಸಾಲದು ಅದನ್ನು ಜೀವಂತವಾಗಿಟ್ಟು ಮಾಡ್ರನ್ ಯುಗದ ಅಶ್ಲೀಲತೆಯ ಲೇಪನವಾಗದಂತೆ ಅಷ್ಟೇ ಪರಿಶುದ್ದವಾಗಿ ಭವಿಷ್ಯದ ಯುವ ಕಲಾವಿದರಿಗೆ ಕಲೆಯ ವರ್ಗಾವಣೆ ಆಗಬೇಕಿದೆ ಆ ಸತ್ಕಾರ್ಯವನ್ನು ಸಕಲ ಯಕ್ಷಗಾನ ಕಲಾವಿದರು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ.

ಕೇವಲ ಕಲೆ ಉಳಿಸಬೇಕು ವರ್ಗಾಹಿಸಬೇಕು ಎಂದರೆ ಸಾಲದು ಅದಕ್ಕೆ ವಿವಿಧ ರೂಪದಲ್ಲಿ ಶ್ರಮವಹಿಸಿ ಬೆವರು ಹರಿಸಿ ಯಕ್ಷಗಾನ ದಂತಹ ದೈವ ಕಲೆ ಜನತೆಗೆ ತಲುಪುವ ಕಾರ್ಯವಾಗಬೇಕಿದೆ ಆ ಪ್ರಯತ್ನದಲ್ಲಿ “ಪ್ರಮೊದ್ ಹೆಗಡೆಯವರ” ನೇತೃತ್ವದ ” ಸಂಕಲ್ಪ “ ಸಂಸ್ಥೆ ಮೂರು ದಶಕಗಳಿಂದ ಯಕ್ಷಗಾನದ ಶ್ರೇಷ್ಟತೆ ಸಾರುವ ಸತ್ಕಾರ್ಯ ನೆರವೇರಿಸುತ್ತ ಬಂದಿದೆ.

ಪ್ರತಿ ವರ್ಷ ಯಲ್ಲಾಪುರದಲ್ಲಿ ಯಕ್ಷಗಾನ ಸಂಯೋಜನೆ ಮಾಡುತ್ತ ಬಂದಿರುವ ಅಪ್ಪಟ ಯಕ್ಷಗಾನ ಪ್ರೇಮಿ ಆರಾಧಕ ” ಶ್ಯಾಮ್ ಸುಂದರ್ ಭಾಸ್ಕರ್ ಆಚಾರಿಯ” ಶ್ರಮವು ಮೆಚ್ಚುವಂತಹುದು
ಯಲ್ಲಾಪುರದ ನಿವಾಸಿ ವಿಶ್ವ ಕರ್ಮ ಸಮಾಜದ ಸಂಘಟನೆಯ ಪ್ರಮುಖ ವಿನಾಯಕ ನಗರ ಗಜಾನನೋತ್ಸವ ಸಮಿತಿ ಪ್ರಮುಖ ಅಕ್ಕಸಾಲಿಗ ವೃತ್ತಿ ನಿರ್ವಹಿಸುತ್ತಾ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುತ್ತ ಬಂದಿದ್ದಾರೆ.

ಯಕ್ಷಗಾನ ಎಂದರೆ ಹೆಚ್ಚು ಪ್ರಿಯವಾಗಿ ಆರಾಧಿಸುವ ಶ್ಯಾಮ್ ಆಚಾರಿ ತನ್ನ ಆಪ್ತರಾದ ಯಕ್ಷಗಾನ ಆರಾಧಕರಾದ ರಾಘವೇಂದ್ರ ಬೆಳ್ಸೂರ್, ಸುಬ್ಬಣ್ಣ ಕಂಚಗಾಲ್ ಮತ್ತು ಅನೇಕ ಹಿತೈಷಿ ಸ್ನೇಹಬಳಗದ ಸಹಕಾರದಲ್ಲಿ ಪ್ರತಿ ವರ್ಷ ಯಲ್ಲಾಪುರದಲ್ಲಿ ಯಕ್ಷಗಾನ ಕಾರ್ಯಕ್ರಮ ಆಯೋಜಿಸುತ್ತಾ ಬಂದಿರುವುದು ಶ್ಲಾಘನೀಯ ಕಾರ್ಯವಾಗಿದೆ.

ಇದೇ ತಿಂಗಳ ದಿನಾಂಕ 27 ರ ಶನಿವಾರದಂದು ಸಂಜೆ 6-15 ಕ್ಕೆ ಯಲ್ಲಾಪುರದ ಗಾಂಧಿ ಕುಟಿರದಲ್ಲಿ ಅತಿಥಿ ಕಲಾವಿದರ ಸಮಾಗಮದಲ್ಲಿ ಆಷಾಡ ಯಕ್ಷ ಸಂಭ್ರಮ ” ಚಕ್ರ ಚಂಡಿಕೆ “ ಎಂಬ ಕಣ್ಮನ ರಂಜಿಸುವ ನೆನಪಿನಾಳದಲ್ಲಿ ಬಲು ದೀರ್ಘಕಾಲ ಉಳಿಯಬಲ್ಲ ಪ್ರಸಂಗ ಆಯೋಜಿಸಿದ್ದಾರೆ. ಯಕ್ಷಗಾನ ಪ್ರೇಮಿಗಳು ಕಲೆಯ ಆರಾಧಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಯಶಸ್ವಿಯಾಗಿಸಬೇಕಿದೆ. ಟಿಕೆಟ್ ದರ ಮೊದಲ ದರ್ಜೆ 500 ಮತ್ತು ದ್ವಿತೀಯ ದರ್ಜೆ 300 ನಿಗದಿಪಡಿಸಲಾಗಿದೆ ನೀವು ಬನ್ನಿ ಜೊತೆಯಲ್ಲಿ ನಿಮ್ಮವರನ್ನು ಕರೆತನ್ನಿ ಎಂದು ಸಂಘಟಕರು ಬಿನ್ನವಿಸಿದ್ದಾರೆ.

ಆಟದ ವಿಶೇಷವೆಂದರೆ ತೆಂಕು – ಬಡಗುತಿಟ್ಟು ಪ್ರಸಿದ್ಧ ಹಿರಿಯ ಕಲಾವಿದರು. ಸ್ತ್ರೀ ವೇಷದ ಮೂಲಕವೇ ಹೆಚ್ಚು ಪ್ರಸಿದ್ದಿ ಪಡೆದು ತೆಂಕು-ಬಡಗಿನ ಮೇಳಗಳಲ್ಲಿ ತಿರುಗಾಟ ಮಾಡಿದವರು.ನೂರಾರು ಪ್ರಸಂಗಗಳಿಗೆ ಸ್ವತಃ ಪದ್ಯ ರಚಿಸಿದವರು 20 ಕ್ಕು ಹೆಚ್ಚು ಪ್ರಸಂಗ ಬರೆದವರು ಅದಕ್ಕಿಂತ ಮಿಗಿಲಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಆದ ತೀರ್ಥಹಳ್ಳಿ ಮೂಲದ ” ಎಂ.ಕೆ.ರಮೇಶ್ ಆಚಾರ್ಯ “ ಅವರು ಮೊಟ್ಟ ಮೊದಲ ಬಾರಿಗೆ ಯಲ್ಲಾಪುರಕ್ಕೆ ಆಗಮಿಸಿ ಆಟದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಪ್ರಸಂಗದಲ್ಲಿ ಗಾನ ಸಾರಥಿ ಜನ್ಸಾಲೆ ಹಾಗು ಸೃಜನ್ ಗುಂಡೂಮನೆ ಅವರ ಗಾನಸುಧೆ ಹರಿಯಲಿದೆ.ಶಶಿ ಆಚಾರ್ಯ ಅವರ ಮದ್ದಳೆ ವಾದನ ಮತ್ತು ಮದ್ದಳೆಗಾರರಾದ ಬಿದ್ಕಲಟ್ಟೆ ಹಾಗು ಕೈಗಡಿ ಅವರ ಚಂಡೆಯ ಜುಗಲ್ ಬಂದಿ ತೀರ್ಥಹಳ್ಳಿ-ತೊಂಬಟ್ಟು ಮೊದಲ ಮುಖಾಮುಖಿ ಯಲ್ಲಾಪುರದಲ್ಲಿ. ರಂಗದ ಕಾವು ಹೆಚ್ಚಿಸಲಿರುವ ಕಿರಾಡಿ,ಉಪ್ಪೂರು, ಮನಮೋಹಕ ಸ್ತ್ರೀ ವೇಷದಲ್ಲಿ ಕುಲಾಲ್, ನಿಮ್ಮನ್ನು ನಕ್ಕು ನಗಿಸಿ ನಗೆಗಡಲಲ್ಲಿ ತೇಲಿಸುವ ದೇವಾಡಿಗರ ಹಾಸ್ಯ ಪಾತ್ರ ಅದ್ಬುತ ” ಚಕ್ರ ಚಂಡಿಕೆ “ ಯಾಗಿ ಅನೇಕ ಮಹಾನ್ ಕಲಾವಿಧರ ಮಹಾ ಸಂಗಮ ಜುಲೈ 27 ರಂದು ಗಾಂಧಿ ಕುಟಿರದಲ್ಲಿ ಯಕ್ಷಗಾನವಾಗಿ ಹೊರಹೊಮ್ಮಲಿದೆ. ಇಂತಹ ಅಪರೂಪದ ಅದ್ಬುತ ಯಕ್ಷಗಾನವನ್ನು ಆಸ್ವಾದಿಸಲು ಮರೆಯದಿರಿ.

ಯಾವುದೆ ಕಲೆ ಕೇವಲ ಪ್ರದರ್ಶನಕ್ಕೆ ಸೀಮಿತವಾಗಿ ನಿಲ್ಲದೆ ನಿರಂತರವಾಗಿ ಜನಮಾನಸದಲ್ಲಿ ಉಳಿಯುವಂತಾಗುವ ಪ್ರಯತ್ನಗಳಿದಗದಾಗ ಮಾತ್ರ ಅದು ನಿರಾತಂಕವಾಗಿ ಭವಿಷ್ಯದ ಪೀಳಿಗೆಗೆ ತಲುಪಲಿದೆ. ಆ ಹಿನ್ನೆಲೆಯಲ್ಲಿ ಯಕ್ಷಗಾನ ಕಲೆ ಉಳಿಯುವ ಮತ್ತು ಬೆಳೆಯುವಲ್ಲಿ ಕಲಾವಿದರು, ಸಂಘಟಕರು ಪ್ರೇಕ್ಷಕರು ಪ್ರಮುಖರಾಗುತ್ತಾರೆ ಈ ಮೂವರ ಬದ್ದತೆಯ ಪರಿಶ್ರಮದಿಂದ ಭವಿಷ್ಯದ ಪೀಳಿಗೆಗೆ ಯಕ್ಷಗಾನ ಕಲೆಯ ವರ್ಗಾವಣೆ ಸಾದ್ಯ..