



ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ – ಪಟ್ಟಣದಲ್ಲಿ ಪ್ರತಿ ರವಿವಾರ ನಡೆಯುವ ಸಂತೆಗೆ ಹಣ್ಣಿನ ರಾಜ ಎಂದೇ ಕರೆಯಲ್ಪಡುವ ಮಾವಿನಹಣ್ಣಿನ ಆಗಮನವಾಗಿದೆ.

ಸೇಂದುಲ ಜಾತಿಯ ಮಾವಿನ ಹಣ್ಣು ಕೆ.ಜಿ ಗೆ 200 ನಂತೆ ಮಾರಾಟವಾಗುತ್ತಿತ್ತು ವರ್ಷದಲ್ಲಿ ಪ್ರಥಮವಾಗಿ ಕೊಂಡು ತಿನ್ನುವ ತವಕದಲ್ಲಿ ಗ್ರಾಹಕರು ಮಾವಿನಹಣ್ಣನ್ನು ಇಷ್ಟಪಟ್ಟು ಕೊಂಡರು.

ಪ್ರತಿ ವರ್ಷಕ್ಕಿಂತ ಈ ವರ್ಷ ಬಿಸಿಲಿನ ಝಳ ಹೆಚ್ಚಿದ್ದು ದಾಹ ನೀಗಿಸುವ ಪ್ರಮುಖ ಪೇಯ ಎಳನೀರು ಸದ್ಯ ಇನ್ನೂ 40 ರಲ್ಲೆ ಬಿಕರಿಯಾಗುತ್ತಿದ್ದು ಮಾಲು ಸಿಗದೆ ಪರದಾಡಿ ಎಲ್ಲೆಲ್ಲಿಂದಲೊ ಹೊತ್ತು ತಂದು ಮಾರಾಟಮಾಡುತ್ತಿದ್ದಾರೆ ಇನ್ನೊಂದು ವಾರದಲ್ಲಿ ಎಳನೀರಿನ ಅಭಾವ ಕಾಡಲಿದ್ದು ಆಗ 50 ರುಪಾಯಿಗೆ ಮಾರಬೇಕಾದ ಪರಿಸ್ಥಿತಿ ಇದೆ ಎನ್ನುತ್ತಿದ್ದಾರೆ ಯಲ್ಲಾಪುರದ ಎಳನೀರು ಮಾರಾಟಗಾರರು.

ಹಳದಿ ಸುಂದರಿ ಎಂದೇ ಹೆಸರಾದ ಬಿಸಿಲು ಕಾಲ ಬರುತ್ತಿದ್ದಂತೆ ತನ್ನ ಬೆಲೆ ಹೆಚ್ಚಿಸಿಕೊಳ್ಳುವ ನಿಂಬೆಹಣ್ಣು ಉತ್ತಮ ಗಾತ್ರದ್ದು 12 ರುಪಾಯಿಗೆ ಒಂದು ಮಾರಾಟವಾಗುತ್ತಿದೆ. ಅದರ ಪರಿಸ್ಥಿತಿಕೂಡ ಭಿನ್ನವಾಗಿಲ್ಲ. ಮಾರಾಟಕ್ಕೆ ಸಾಕಷ್ಟು ಪ್ರಮಾಣದಲ್ಲಿ ಮಾಲು ಸಿಗದೆ ಕೆಲವೇ ದಿನಗಳಲ್ಲಿ 15 ರುಪಾಯಿ ತಲುಪಿದರೆ ಆಶ್ಚರ್ಯ ಪಡಬೇಕಿಲ್ಲ ಎಂಬುದು ವರ್ತಕರ ಮಾತಾಗಿದೆ.

ಇನ್ನುಳಿದಂತೆ ಕಲ್ಲಂಗಡಿ, ಖರ್ಬೂಜ,ಪಪ್ಪಾಯ, ಕಬ್ಬಿನ ಹಾಲು, ಮಜ್ಜಿಗೆ ಬಿಸಿಲಿನತಾಪಕ್ಕೆ ಹೆಚ್ಚಾಗಿ ಮಾರಾಟವಾಗುತ್ತಿದೆ ಸದ್ಯ ಬೆಲೆ ಮೊದಲಿನಂತೆ ಇದೆ.

ಒಟ್ಟಿನಲ್ಲಿ ರಣ ಬಿಸಿಲಿಗೆ ಭೂಮಿ ಸುಡು ಕೆಂಡವಾಗಿದ್ದು ಮಳೆರಾಯನ ಆಗಮನಕ್ಕಾಗಿ ಆಗಸದ ಕಡೆಗೆ ಎಲ್ಲರ ದೃಷ್ಟಿ ನೆಟ್ಟಿದೆ ಇಲ್ಲವಾದರೆ ಕುಡಿಯುವ ನೀರಿಗು ಬರಬರುವ ಸಾದ್ಯತೆ ಇದೆ.




Prathidvani Yellapura