

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ – ಪಟ್ಟಣದ ನಿವಾಸಿ ಹೆಸರಾಂತ ಸಂಗೀತ ವಿದ್ವಾಂಸರಾದ ವಾಣೀ ರಮೇಶ್ ಹೆಗಡೆ ಪುತ್ರಿ ವಿಭಾ ರಮೇಶ್ ಹೆಗಡೆ ಆಂಧ್ರ ಪ್ರದೇಶದ ಪ್ರತಿಷ್ಟಿತ ಆದ್ಯಾತ್ಮ ಕ್ಷೇತ್ರವಾದ ವೆಂಕಟೇಶ್ವರ ನ ಸನ್ನಿದಾನ ತಿರುಪತಿ ದೇವಸ್ಥಾನದ ವತಿಯಿಂದ ಸಂಗೀತ ಸ್ವರ ಸೇವೆಗೆ ಪ್ರತಿಷ್ಟಿತ. ” ಯುವ ಪುರಸ್ಕಾರ ” ನೀಡಿ ಗೌರವಿಸಲಾಯಿತು.

ಫೆ,9 ರಂದು ವಿಭಾ ರಮೇಶ ಹೆಗಡೆಗೆ ತಿರುಮಲ ತಿರುಪತಿ ದೇವಸ್ಥಾನ ಆಂಧ್ರಪ್ರದೇಶ ವತಿಯಿಂದ ಪರಮ ಪೂಜ್ಯ ಪಲಿಮಾರು ಮಠಾಧೀಶರ ಅಮೃತ ಹಸ್ತದಿಂದ ಆಶೀರ್ವಾದ ಪೂರ್ವಕವಾಗಿ ” ಯುವ ಪುರಸ್ಕಾರ ” ಪ್ರಶಸ್ತಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಟಿ ಟಿ ಡಿ ಯ ಧರ್ಮಾಧಿಕಾರಿಗಳು ಉಪಸ್ಥಿತರಿದ್ದರು.

ಕುಮಾರಿ ವಿಭಾ ರಮೇಶ್ ಹೆಗಡೆ ಸಂಗೀತ ಕ್ಷೇತ್ರದಲ್ಲಿ ಅವಿರತ ಸೇವೆ ಸಲ್ಲಿಸುತ್ತ ಯಲ್ಲಾಪುರದ ಕೀರ್ತಿಯನ್ನು ಹೆಚ್ಚಿಸುತ್ತಿರುವುದು ಮತ್ತು ಆಂಧ್ರಪ್ರದೇಶದ ಜಗತ್ಪ್ರಸಿದ್ಧ ತಿರುಪತಿ ದೇವಸ್ಥಾನದ ಅಡಿಯಲ್ಲಿ ಯುವ ಪ್ರತಿಭಾ ಪುರಸ್ಕಾರ ಸ್ವೀಕರಿಸಿ ಯಲ್ಲಾಪುರ ನೆಲದ ಗೌರವಕ್ಕೆ ಗರಿ ಮೂಡಿಸಿರುವುದನ್ನು ಯಲ್ಲಾಪುರದ ಜನಪ್ರತಿನಿಧಿಗಳು,ಸಂಗೀತ ಕ್ಷೇತ್ರದ ಹಿರಿಯರು, ಆದ್ಯಾತ್ಮ ಕ್ಷೇತ್ರದ ಮಹನಿಯರು, ಸಮಸ್ತ ನಾಗರಿಕರು ಅಭಿನಂದಿಸಿದ್ದಾರೆ.

ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ವತಿಯಿಂದ ಕುಮಾರಿ ವಿಭಾ ರಮೇಶ್ ಹೆಗಡೆ ಯವರಿಗೆ ಅಭಿನಂದನೆಗಳು


