

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ – ಪಟ್ಟಣದ ಮಂಜುನಾಥ ನಗರದಲ್ಲಿ ಶ್ರೀ ರಾಮ ಭಕ್ತ ಬಳಗದ ಭಜನಾ ತಂಡ ಉದಯಿಸಿದೆ.


ಜನವರಿ 22 ರಂದು ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಮಂದಿರ ಲೋಕಾರ್ಪಣೆಯಾಗಿ ರಾಮಲಲ್ಲಾನ ಪ್ರಾಣ ಪ್ರತಿಷ್ಟೆಯಾದ ಹಿನ್ನೆಲೆಯಲ್ಲಿ ರಾಷ್ಟ್ರದಾದ್ಯಂತ ಹಿಂದು ಭಕ್ತಗಣ ವಿಜ್ರಂಭಣೆಯಿಂದ ಪೂಜಾವಿಧಿ ವಿಧಾನಗಳನ್ನು ಆಚರಿಸಿ ಸಂಭ್ರಮಿಸಿತ್ತು. ಅದೇರೀತಿ ಯಲ್ಲಾಪುರ ಪಟ್ಟಣದ ಮಂಜುನಾಥ ನಗರದಲ್ಲಿಯು ಶ್ರೀರಾಮನ ಮಹೋತ್ಸವ ಶ್ರದ್ದಾ ಭಕ್ತಿಯಿಂದ ಜರುಗಿತ್ತು.ಇದರಿಂದ ಹಿಂದು ಕುಟುಂಬಗಳಲ್ಲಿ ಆದ್ಯಾತ್ಮ ಚಿಂತನೆ, ಸನಾತನ ಪದ್ದತಿ ಪರಂಪರೆ ಕೊಂಚ ಜಾಗೃತಗೊಂಡ ಹಿನ್ನೆಲೆಯಲ್ಲಿ ಮಂಜುನಾಥ ನಗರದ ರಾಮ ಭಕ್ತ ಬಳಗ ಪ್ರತಿ ಶನಿವಾರ ಸಂಜೆ ವಿಶೇಷ ಪೂಜೆಯೊಂದಿಗೆ ಭಜನೆ ಮಾಡಿ ಪ್ರಸಾದ ಹಂಚುವ ಹೊಸ ಪ್ರಕ್ರಿಯೆ ಪ್ರಾರಂಭಿಸಿದ್ದು ವಾಡ್೯ ಸದಸ್ಯ ಸತೀಶ್ ಶಿವಾನಂದ ನಾಯ್ಕ ಅವರ ಸಹಕಾರದಲ್ಲಿ ಶನಿವಾರ 10, ರಂದು ಮಂಜುನಾಥ ನಗರದ ಮಹಿಳೆಯರು ಮಕ್ಕಳು ಸಾರ್ವಜನಿಕ ಗಜಾನನೋತ್ಸವ ಸಮಿತಿಯ ಶೆಡ್ ನಲ್ಲಿ ಕೆಲಕಾಲ ಭಜನೆ ಮಾಡಿ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಿದರು.
ಹಿಂದು ಧಾರ್ಮಿಕ ಆಚರಣೆಗಳು ಇತ್ತೀಚಿನ ದಿನಗಳಲ್ಲಿ ಕೇವಲ ಒಂದು ದಿನದ ಉತ್ಸವದಲ್ಲಿ ಕೇಸರಿತೊಟ್ಟು ಹಣೆಗೆ ತಿಲಕವಿಟ್ಟು ಡಿ.ಜೆ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿ ಸುಮ್ಮನಾಗಿಬಿಡುವ ಪದ್ದತಿಗೆ ಬಂದಿದ್ದು ಆತಂಕಕಾರಿ ಬೆಳವಣಿಗೆಯಾಗಿದೆ. ಭವಿಷ್ಯದ ಪೀಳಿಗೆಗೆ ಧರ್ಮದ ಆಚರಣೆ, ಪದ್ದತಿ ಪರಂಪರೆ ಆಚಾರಗಳ ಮಾಹಿತಿ ನೀಡಬೇಕಿದೆ ಇಲ್ಲವಾದಲ್ಲಿ ಅಂತರ್ಜಾಲದಲ್ಲಿ ಹುಡುಕಿ ಆಚರಣೆಗಳನ್ನು ತಿಳಿದುಕೊಳ್ಳುವ ಸ್ಥಿತಿ ಬರಲಿದೆ ಶ್ರೀರಾಮನ ಆಚರಣೆ ಮಾಡಿದ ಎಲ್ಲಾ ಭಾಗಗಳ ಸಂಘಟನೆಗಳು ಇಂತಹ ಆದ್ಯಾತ್ಮ ಚಟುವಟಿಕೆಗಳನ್ನು ಪ್ರೋತ್ಸಾಹಿಸಬೇಕಿದೆ.
ರಜನಿ ಚಂದ್ರಶೇಖರ್
ಭಜನಾ ತಂಡದ ಪ್ರಮುಖರು


