




ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಕಾಯಕ ಯೋಗಿ ಜಗಜ್ಯೋತಿ ಬಸವೇಶ್ವರರ ಜೀವನ ಮಾರ್ಗ ಆದರ್ಶ ತತ್ವಗಳು ನಮ್ಮ ಬದುಕಿನ ನಿತ್ಯ ಕಾಯಕದಲ್ಲಿ ಬೆರೆತಾಗ ಮಾತ್ರ ಪ್ರತಿ ವರ್ಷದ ಜಯಂತಿ ಕಾರ್ಯಕ್ರಮ ಸಾರ್ಥಕವಾಗಲಿದೆ. ಹೇಮರೆಡ್ಡಿ ಮಲ್ಲಮ್ಮ ಅಪ್ರತಿಮ ಆಧ್ಯಾತ್ಮದೊಂದಿಗೆ ಸಮಾಜಕ್ಕೆ ಸಮಾನತೆ ಮತ್ತು ಸಾಮರಸ್ಯದ ಬದುಕಿನ ಸತ್ಯ ಪಸರಿಸಿದವಳು ಅಂತಹ ಮಹಾತ್ಮರ ಜಯಂತಿ ಆಚರಿಸಿ ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಸಾಗೋಣ ಸಮಾಜಕ್ಕೆ ಪೂರಕರಾಗೋಣ ಎಂದು ಪತ್ರಕರ್ತ ಕೇಬಲ್ ನಾಗೇಶ್ ಹೇಳಿದರು.

ಅವರು ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಹಮ್ಮಿಕೊಂಡ ಜಗಜ್ಯೋತಿ ಬಸವೇಶ್ವರ ಮತ್ತು ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದರು.
ಕಾಯಕವೆ ಕೈಲಾಸವೆಂದು ಶ್ರಮವೆ ಪರಮಾತ್ಮನೆಂದು ಜಗತ್ತಿಗೆ ವಚನ ಸಾಹಿತ್ಯದ ಮೂಲಕ ಸಮಾಜದ ಸಮಾನತೆಗೆ ಜಾಗೃತ ಸಂದೇಶ ಸಾರಿ ನಾಡಿನ ಸಾಂಸ್ಕೃತಿಕ ರಾಯಭಾರಿ ಎನಿಸಿಕೊಂಡ ಬಸವೇಶ್ವರರು ಸಾರ್ವಕಾಲಿಕ ಪ್ರೇರಣ ಶಕ್ತಿಯಾಗಿದ್ದಾರೆ. ಸಮಾಜದ ಚುಚ್ಚು ನುಡಿಗಳಿಗಂಜದೆ ಪರಶಿವನ ಧ್ಯಾನದಲ್ಲೆ ಮುಳುಗಿ ಸಮಾಜಕ್ಕೆ ಜಾಗೃತ ಸಂದೇಶವಿತ್ತವರು ಹೇಮರೆಡ್ಡಿ ಮಲ್ಲಮ್ಮ ಅವರು ಈ ಇರ್ವರ ಜಯಂತಿ ಆಚರಣೆ ಅರ್ಥಪೂರ್ಣ ಎಂದರು.

ಈ ಸಂದರ್ಭದಲ್ಲಿ ಬಸವೇಶ್ವರ ದೇವಸ್ಥಾನದ ಅಧ್ಯಕ್ಷ ಹಾಗು ವೀರಶೈವ ಲಿಂಗಾಯತ ಸಮಾಜದ ಪ್ರಮುಖ ಮಹೇಶ್ ಗೌಳಿ, ಪಿ.ಎಸ್.ಐ ಸಿದ್ದು ಗುಡಿ, ಸಮಾಜ ಕಲ್ಯಾಣ ಇಲಾಖೆಯ ನಾಗೇಶ್ ಮಲಮೇತ್ರಿ, ಪಟ್ಟಣ ಪಂಚಾಯತ್ ನ ವೆಂಕಟರಮಣ,ಅಕ್ರಂ, ಭೂ ಮಾಪನ ಇಲಾಖೆಯ ಭರತ್ ಕುಮಾರ್, ತಾಲೂಕು ಪಂಚಾಯತದ ಗಣಪತಿ ಗಾಂವ್ಕರ್, ಗ್ರಂಥ ಪಾಲಕ ಎಫ್.ಹೆಚ್.ಬಾಸೂರ್, ಕಂದಾಯ ಇಲಾಖೆ ಸಿಬ್ಬಂದಿಗಳಾದ ಕುಮಾರ್ ಪಾಟಣ್ಕರ್, ಆದಂ ಇನ್ನಿತರರು ಉಪಸ್ಥಿತರಿದ್ದರು.
ಕಂದಾಯ ಇಲಾಖೆ ಅಧಿಕಾರಿಬಶ್ರೀದರ ಮಡಿವಾಳ ಜಗಜ್ಯೋತಿ ಬಸವೇಶ್ವರ ಮತ್ತು ಹೇಮರೆಡ್ಡಿ ಮಲ್ಲಮ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ ವಂದಿಸಿದರು.


Prathidvani Yellapura