
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಯಾವುದೇ ಸರ್ಕಾರಿ ಕೆಲಸ ಕಾರ್ಯಗಳು ಮಂತ್ರಿ ಗಳಿಂದ, ಶಾಸಕರಿಂದ ಆಗುವಂತಹ ಸನ್ನಿವೇಶಗಳೇ ಇಲ್ಲ. ಆದರೂ ಹೆಬ್ಬಾರ್ ಅವರ ಮನೆ ಮುಂದೆ ಸದಾ ಜನಸಂದಣಿಯಿಂದ ತುಂಬಿರುತ್ತದೆ.

ಅಧಿಕಾರವಿರಲಿ,ಇಲ್ಲದಿರಲಿ ಹೆಬ್ಬಾರ್ ಸದಾ ಜನರ ಮಧ್ಯೆ ಇರುವಂತಹ ವ್ಯಕ್ತಿತ್ವದವರು. ಚುನಾವಣೆಯ ಹೊಸ್ತಿಲಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಹಳ್ಳಿ ಹಳ್ಳಿಗಳಿಗಳಲ್ಲಿ ಕಾರ್ಯಕರ್ತರ ಸಭೆಗೆ ದೌಡಾಯಿಸುತ್ತಿದ್ದು ಮುಂಜಾನೆ ಮನೆ ಬಿಡುವ ಸಂದರ್ಭದಲ್ಲಿ ಮನೆಯ ಮುಂದೆ ನೂರಾರು ಸಂಖ್ಯೆಯ ಜನರು ಈಗಲೂ ಅವರನ್ನು ಭೇಟಿ ಮಾಡಲು ಕಾಯುತ್ತಿರುತ್ತಾರೆ. ಮನೆ ಮುಂದೆ ಕಾಯುತ್ತಿರುವ ಜನಸಾಮಾನ್ಯರನ್ನು ಮಾತನಾಡಿಸಿಯೇ ಹೆಬ್ಬಾರ್ ಮುಂದೆ ಹೋಗುತ್ತಾರೆ. ಕೈಲಾಗುವ ಸಹಾಯ ಮಾಡುವುದು, ಇಲ್ಲವಾದಲ್ಲಿ ಅವರ ಕಷ್ಡ ಗಳಿಗೆ ಪುತ್ರ ವಿವೇಕ್ ಹೆಬ್ಬಾರ್ ಅವರಿಗೆ ಬಗೆಹರಿಸಲು ಸೂಚಿಸುವುದು ಅವರ ಬೆಳಗಿನ ಕಾಯಕವಾಗಿದೆ.


ಜನರೊಂದಿಗೆ ಸಂಪರ್ಕ ನಿನ್ನೆಮೊನ್ನೆಯದಲ್ಲ, ಲಾರಿ ಕ್ಲೀನರ್ ಆಗಿದ್ದಾಗಿನಿಂದಲೂ ಸಾವಿರಾರು ಸಂಖ್ಯೆಯ ಆತ್ಮೀಯರನ್ನು ಗಳಿಸಿದ್ದೇನೆ. ನಿತ್ಯ ಬರುವವರು ಕೇವಲ ರಾಜಕೀಯಕ್ಕಾಗಿ ಅಥವಾ ಕೆಲಸ ಕಾರ್ಯಗಳಿಗಾಗಿ ಬರುತ್ತಾರೆಂದೇನೂ ಇಲ್ಲ. ಕೆಲವರು ನನ್ನನ್ನು ನೋಡಲೆಂದೇ ಬರುತ್ತಾರೆ, ಕುಶಲೋಪರಿ ವಿಚಾರಿಸಲು ಬರುತ್ತಾರೆ, ನನ್ನ ಸ್ನೇಹಿತರೂ ಸಹ ನನ್ನನ್ನು ಕಂಡು ಮಾತನಾಡಿಸಿ ಹೋಗುತ್ತಾರೆ. ಹಾಗಾಗಿ ರಾಜಕೀಯ, ಅಧಿಕಾರ ಒಂದು ವಿಭಾಗ, ಆತ್ಮೀಯತೆ , ಅವಿನಾಬಾವ ಸಂಬಂಧ ಮತ್ತೊಂದು ವಿಭಾಗ. ಒಟ್ಟಿನಲ್ಲಿ ನಿತ್ಯವೂ ಜನರನ್ನು ಮಾತನಾಡಿಸದೇ ನನಗೆ ನಿದ್ದೆ ಬರುವುದಿಲ್ಲ, ಜನರಿಗೂ ನನ್ನನ್ನು ಮಾತನಾಡಿಸದಿರಲು ಆಗುವುದಿಲ್ಲ. ಅರಬೈಲ್ ಶಿವರಾಮ ಹೆಬ್ಬಾರ್
Prathidvani Yellapura