
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ಪಟ್ಟಣದ ಪಾದಚಾರಿ ಮಾರ್ಗಗಳೆಲ್ಲವೂ ಗೂಡಂಗಡಿಗಳ ಅತಿಕ್ರಮಣಕ್ಕೊಳಗಾಗಿದ್ದು ನೂರಾರು ಬಾರಿ ಮಾಧ್ಯಮಗಳು, ಸಂಘ ಸಂಸ್ಥೆಗಳು, ಸಾರ್ವಜನಿಕರು ಎಚ್ಛರಿಸುತ್ತಾ ಬಂದರೂ ತೆರವು ಕಾರ್ಯವಾಗದೇ ಹಾಗೆಯೇ ಮುಂದುವರೆಯುತ್ತಿದ್ದು ಗೂಡಂಗಳಿಗಳನ್ನು ಎಂದಿಗೆ ತೆರವುಗೊಳಿಸುತ್ತಾರೋ ಎಂಬುದು ಸಾರ್ವಜನಿಕರ ದೊಡ್ಡ ಪ್ರಶ್ನೆಯಾಗಿದೆ.

ಬಸ್ ನಿಲ್ದಾಣದ ಮುಂಭಾಗ ಬೆಲ್ ರಸ್ತೆಯ ಎರಡೂ ಬದಿ, ಬಸವೇಶ್ವರ ವೃತ್ತದ ಆಸುಪಾಸು, ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿಯ ಬಹುತೇಕ ಕಡೆಗಳಲ್ಲಿ ಪುಟ್ಪಾತ್ ಅತಿಕ್ರಮಣಗೊಂಡಿದ್ದು ಪಾದಚಾರಿಗಳಿಗೆ ಲಭ್ಯವಿಲ್ಲದಂತಾಗಿದೆ. ಮಾಧ್ಯಮಗಳಲ್ಲಿ ಸುದ್ಧಿಯಾಗುತ್ತಲೇ ಸ್ಥಳೀಯ ಆಡಳಿತ ತೆರವು ಕಾರ್ಯಾಚರಣೆಗೆ ಇಳಿದಂತೆ ಮಾಡಿ ಒಂದೆರಡು ಅಂಗಡಿಕಾರರಿಗೆ ಎಚ್ಚರಿಕೆ ನೀಡಿ ಕೈಬಿಡುತ್ತಾರೆ.

ಪಟ್ಟಣದ ಬಸವೇಶ್ವರ ವೃತ್ತ, ಬಸ್ ನಿಲ್ದಾಣದ ಮುಂಭಾಗದ ಕಿರಿದಾದ ಮಾರ್ಗದಲ್ಲೂ ಗೂಡಂಗಡಿಗಳಿದ್ದು ಪಾದಚಾರಿ ಮಾರ್ಗವಲ್ಲದೇ ವಾಹನ ಸಂಚಾರದ ರಸ್ತೆಗೂ ಇಳಿದು ಇಕ್ಕಟ್ಟಿನ ವಾತಾವರಣ ಸೃಷ್ಠಿಸುತ್ತಿರುವುದು ಅಪಘಾತದ, ಅವಘಡಗಳ ಮುನ್ಸೂಚನೆ ನೀಡುತ್ತಿದೆ. ಸ್ಥಳೀಯ ಆಡಳಿತ ಇನ್ನಾದರೂ ಎಚ್ಛೆತ್ತುಕೊಂಡು ಪಾದಚಾರಿ ಮಾರ್ಗಗಳನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಿಕೊಡಬೇಕಿದೆ ಎಂಬುದು ಹಲರ ಅಭಿಪ್ರಾಯವಾಗಿದೆ.





Prathidvani Yellapura