





ಪ್ರತಿಧ್ವನಿ ಯಲ್ಲಾಪುರ : ಬಾವಿ ಸ್ವಚ್ಛಗೊಳಿಸಲು ಬಾವಿಗಿಳಿದ ಅಣ್ಣ ಅಸ್ವಸ್ಥನಾಗಿದ್ದನ್ನು ಕಂಡು ಬಾವಿಗಿಳಿದ ತಮ್ಮ ಅಣ್ಣನನ್ನು ಮೇಲಕ್ಕೆ ಕಳುಹಿಸಿ ತಾನು ಉಸಿರುಗಟ್ಟಿ ಪ್ರಾಣಬಿಟ್ಟ ದಾರುಣ ಘಟನೆ ಮಂಗಳವಾರ ತಾಲೂಕಿನ ಗೇರಾಳ ಗ್ರಾಮದಲ್ಲಿ ನಡೆದಿದೆ.

ರವಿ ಲಕ್ಷ್ಮಣ ಅಂಕೋಲೇಕರ(42) ಎಂಬಾತನೇ ಮೃತಪಟ್ಟ ವ್ಯಕ್ತಿಯಾಗಿದ್ದು ತನ್ನ ಅಣ್ಣ ಮತ್ತು ಅತ್ತಿಗೆಯೊಂದಿಗೆ ಮನೆ ಎದುರಿನ ಬಾವಿಯನ್ನು ಸ್ವಚ್ಛಗೊಳಿಸುವಾಗ ಘಟನೆ ನಡೆದಿದೆ. ಅಣ್ಣ ಕುಮಾರ ಎಂಬಾತನು ಹಗ್ಗಕಟ್ಟಿಕೊಂಡು ಬಾವಿಗಿಳಿದವನು ಸ್ವಚ್ಛಗೊಳಿಸುತ್ತಿರುವಾಗ ಉಸಿರುಗಟ್ಟಿ ಅಸ್ವಸ್ಥನಾಗಿದ್ದನ್ನು ಕಂಡ ತಮ್ಮ ರವಿ ತಕ್ಷಣ ಬಾವಿಗಿಳಿದು ಅಣ್ಣನ ಸೊಂಟಕ್ಕೆ ಹಗ್ಗ ಕಟ್ಟಿ ಮೇಲಕ್ಕೆ ಕಳುಹಿಸಿದನು. ನಂತರ ಬಾವಿಯೊಳಗೆ ಉಸಿರಾಟದ ತೊಂದರೆಗೆ ಸಿಲುಕಿದವನು ನೀರಿನಲ್ಲಿ ಬಿದ್ದು ಉಸಿರುಗಟ್ಟಿ ಮೃತಪಟ್ಟಿರುತ್ತಾನೆ.

ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Prathidvani Yellapura