








ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ – ಯಲ್ಲಾಪುರ ಲಯನ್ಸ್ ಕ್ಲಬ್ ಹಾಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಧತ್ವ ನಿವಾರಣ ಸಂಸ್ಥೆ ಕಾರವಾರ ಸಂಯುಕ್ತಾಶ್ರಯದಲ್ಲಿ 29-2-24 ರಂದು ಯಲ್ಲಾಪುರದ ಅಡಿಕೆ ಭವನದಲ್ಲಿ “ಕಣ್ಣಿನಪೊರೆ ಉಚಿತ ತಪಾಸಣಾ ಶಿಭಿರ ಮತ್ತು ಉಚಿತ ಶಸ್ತ್ರ ಚಿಕಿತ್ಸಾ ಶಿಭಿರ ” ಯಶಸ್ವಿಯಾಗಿ ನೆರವೇರಿತು.

ಕುಮುಟದ ಲಯನ್ಸ್ ರೇವಣಕರ ಚಾರಿಟಬಲ್ ಕಣ್ಣಿನ ಆಸ್ಪತ್ರೆ ನೇತ್ರ ತಜ್ಞ ವೈಧ್ಯರುಗಳಾದ ಡಾ|| ಮನೋಜ ಎಂ.ಎನ್ ಮತ್ತು ಡಾ|| ರಾಜಶೇಖರ ಡಿ. ಶಿಭಿರದಲ್ಲಿ ಪಾಲ್ಗೊಂಡು ಕಣ್ಣಿನ ಪೊರೆ ತಪಾಸಣೆ ಮಾಡಿದರು.
ಈ ಸಂದರ್ಭದಲ್ಲಿ ಯಲ್ಲಾಪುರ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಸುರೇಶ್ ಬೋರ್ಕರ್, ಕೋಶಾಧ್ಯಕ್ಷ ಶೇಷಗಿರಿ ಪ್ರಭು ಪ್ರಮುಖರಾದ ಎಸ್.ಎಲ್.ಭಟ್ , ನೇತ್ರೇಕರ್, ಸುನಂದ ಬೋರ್ಕರ್, ಇನ್ನಿತರ ಪದಾದಿಕಾರಿಗಳು ಸದಸ್ಯರು ಆರೋಗ್ಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
.
Prathidvani Yellapura