

ಪ್ರತಿಧ್ವನಿ ಯಲ್ಲಾಪುರ : ಪ್ರಸ್ತುತ ಸಮಾಜಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಎಲ್ಲರೊಂದೇ ಎನುವ ಭಾವ ಮತ್ತು ನುಲಿ ಚಂದಯ್ಯ ಅವರ ಕಾಯಕವೇ ದೇವರೆಂಬ ಭಕ್ತಿ ಅಳವಡಿಸಿಕೊಳ್ಳಬೇಕಿದೆ. ಸಮಾನತೆಯ ಸಂದೇಶ ಸಾರಿ ಅಂತಸ್ತಿನ ವ್ಯತ್ಯಯಕ್ಕು ಮನುಕುಲದ ನಡೆಗು ಸಂಬಂಧವಿಲ್ಲದೆ ಆದ್ಯಾತ್ಮದೊಂದಿಗೆ ಸಾಮಜಿಕ ನ್ಯಾಯದ ಪರ ಹೊಸ ಅಲೆಯನ್ನೆ ಎಬ್ಬಿಸಿ ಕೇರಳದ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶಗಳನ್ನು ಪರಿಪಾಲಿಸೋಣ ಎಂದು ತಹಶಿಲ್ದಾರ ಗುರುರಾಜ ಹೇಳಿದರು.

ಅವರು ಪಟ್ಟಣದ ತಾಲೂಕು ಆಡಳಿತ ಸಭಾ ಭವನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಮತ್ತು ನುಲಿಯ ಚಂದಯ್ಯ ಅವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಮಾತನಾಢಿದರು.

ಇಬ್ಬರೂ ಮಹಾ ಪುರುಷರ ಕುರಿತು ನಾಮಧಾರಿ ಸಮಾಜದ ಪ್ರಮುಖ ಸಂತೋಷ್ ನಾಯ್ಕ ಮತ್ತು ಹನುಮಂತ ಕೊರವರ ಮಾತನಾಡಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕಮ್ಮಾರ್, ಗ್ರೇಡ್ 2 ತಹಶಿಲ್ದಾರ ಸಿ.ಜಿ. ನಾಯ್ಕ, ಪಟ್ಟಣ ಪಂಚಾಯತ್ ಸದಸ್ಯರಾದ ಸತೀಶ್ ಶಿವಾನಂದ ನಾಯ್ಕ, ಸೋಮೇಶ್ವರ ನಾಯ್ಕ, ಪ್ರಮುಖ ರವಿನಾಯ್ಕ್ ಇಂಜನಿಯರ್ ಅಶೋಕ ಕೊರವರ್, ಸತ್ಯಭ್ಯಾಮ ಶಿಕ್ಷಕಿ ಇನ್ನಿತರ ಅಧಿಕಾರಿಗಳು ಪ್ರಮುಖರು ಉಪಸ್ಥಿತರಿದ್ದರು.







Prathidvani Yellapura