
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ…..
ಪ್ರತಿಧ್ವನಿ,ಯಲ್ಲಾಪುರ : ಮಕ್ಕಳಿಗೆ ರಜೆ ಬಂದರೆ ನೆಂಟರಮನೆ, ಪ್ರವಾಸ, ಮೋಜು ಮಸ್ತಿಯ ಆಟ, ಹಳ್ಳಕೆರೆ ತೊರೆಗಳಿಗೆ ಭೇಟಿ ಹೀಗೆ ಹಲವು ವಿಧದಲ್ಲಿ ರಜೆಯ ಮಜವನ್ನು ಸವಿಯಲು ಅಣಿಯಾಗುತ್ತಿದ್ದರು. ಆದರೆ ಇತ್ತೀಚಿಗೆ ಕೇವಲ “ಮೊಬೈಲ್” ಒಂದನ್ನೇ ಪ್ರಪಂಚ ಎಂದುಕೊಂಡು ಮಕ್ಕಳು ಕುಬ್ಜರಾಗುತ್ತಿರುವುದು ದುರಂತವಾಗಿದೆ. ಇದಕ್ಕೆ ಪರಿಹಾರವೆಂಬಂತೆ ಮೈಂಡ್ ಟ್ರೈನರ್ ಯೋಗೇಶ್ ಶಾನಭಾಗ ನೇತೃತ್ವದಲ್ಲಿ ಮಕ್ಕಳಿಗೆ ಕ್ರಿಕೆಟ್ ಕೋಚಿಂಗ್ ಕ್ಲಾಸ್ ಪ್ರಾರಂಭಿಸಿದ್ದು 35 ಕ್ಕೂ ಅಧಿಕ ಮಕ್ಕಳು ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.

ಶಿಬಿರವು ಮುಂಜಾನೆ ಮತ್ತು ಸಂಜೆ ಕ್ಕೆ ನಡೆಯುತ್ತಿದ್ದು ಚಿಕ್ಕಮಕ್ಕಳಿಂದ ಪಿಯುಸಿವರೆಗಿನ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಇಬ್ಬರು ಹೆಣ್ಣುಮಕ್ಕಳು ಸುಜನ್ಯಾ ಸುರೇಶ್ , ಸೇಜಲ್ ಸತೀಶ ನಾಯ್ಕ ಶಿಬಿರದಲ್ಲಿ ಪಾಲ್ಗೊಂಡು ತರಬೇತಿ ಪಡೆಯುತ್ತಿರುವುದು ವಿಶೇಷವಾಗಿದೆ.
ಇತ್ತೀಚಿನ ದಿನಗಳಲ್ಲಿ ಮಹಿಳಾ ಕ್ರಿಕೆಟರ್ಸ್ ಅಂತರಾಷ್ಟೀಯ ಮಟ್ಟದಲ್ಲಿ ಖ್ಯಾತಿ ಗಳಿಸುತ್ತಿರುವುದು ಹೆಣ್ಣುಮಕ್ಕಳ ಸೇರ್ಪಡೆಗೆ ಸ್ಪೂರ್ತಿಯಾಗಿದೆ.

ಕ್ರಿಕೆಟ್ ತರಬೇತಿಯನ್ನು ಸ್ಥಳೀಯ ಆಟಗಾರ ಅಮಿತ್ ಕಮ್ಮಾರ್ ನೀಡುತ್ತಿದ್ದು ಕಾಳಮ್ಮನಗರದ ತಾಲೂಕಾ ಕ್ರೀಡಾಂಗಣದಲ್ಲಿ ಪ್ರಾಕ್ಟೀಸ್ ನೆಟ್ ನಿರ್ಮಿಸಲಾಗಿದೆ.

ಶಿಬಿರಾರ್ಥಿಗಳ ದೇಹ ಸದೃಡತೆಗೆ ಫಿಟ್ನೆಸ್ ಕೋಚ್ ಆಗಿ ನಿವೃತ್ತ ದೈಹಿಕ ಶಿಕ್ಷಕ ಜಿ.ಎಂ ತಾಂಡುರಾಯನ್ ಕಾರ್ಯನಿರ್ವಹಿಸುತ್ತಿದ್ದು ಪ್ರಮುಖ ತರಬೇತುದಾರ ಧಾರವಾಡದಿಂದ ಕಾಲಕಾಲಕ್ಕೆ ಬಂದು ಸಲಹೆ ಸೂಚನೆಗಳನ್ನು ಶಿಬಿರಾರ್ಥಿಗಳಿಗೆ ನೀಡುತ್ತಿದ್ದಾರೆ.

ಒಟ್ಟಿನಲ್ಲಿ ಬೇಸಿಗೆ ರಜೆ ಬಂತೆAದು ಹಳ್ಳಕೊಳ್ಳಗೊಳಿಗೆ ಹೋಗಿ ಜೀವಹಾನಿ ಮಾಡಿಕೊಳ್ಳದೇ ಮೊಬೈಲ್ ಗೀಳು ಹತ್ತಿಸಿಕೊಳ್ಳದೇ ಬೇಡದ ಚಟುವಟಿಕೆಯಿಂದ ಪೋಷಕರಿಗೆ ಸಮಸ್ಯೆ ತಂದೊಡ್ಡದೇ ದೇಹದ ಆರೋಗ್ಯ , ಮಾನಸಿಕ ಸದೃಡತೆ, ಕ್ರೀಡಾ ಉಲ್ಲಾಸ , ಭವಿಷ್ಯದಲ್ಲಿ ಉತ್ತಮ ಕ್ರಿಕೆಟರ್ ಆಗುವ ಅವಕಾಶ ತರಬೇತಿಯಿಂದ ಸಿಗುತ್ತಿರುವುದು ಪೋಷಕರಿಗೆ , ಕ್ರೀಡಾಪ್ರೇಮಿಗಳಿಗೆ ಸಂತಸ ತಂದಿದೆ.
Prathidvani Yellapura