
ಪ್ರತಿಧ್ವನಿ,ಯಲ್ಲಾಪುರ : 2022-23 ನೇ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸ್ಥಳೀಯ ವೈ.ಟಿ.ಎಸ್.ಎಸ್ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಕನ್ನಡ ಮಾಧ್ಯಮ 96.07% ಫಲಿತಾಂಶ ದಾಖಲಿಸಿದೆ. ಕನ್ನಡ ಮಾಧ್ಯಮದಲ್ಲಿ ಪರೀಕ್ಷೆಗೆ ಕುಳಿತ 102 ವಿದ್ಯಾರ್ಥಿಗಳಲ್ಲಿ 98 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕನ್ನಡ ಮಾಧ್ಯಮದಲ್ಲಿ ಕುಮಾರ ದಿವಾಕರ ಗೇರಗದ್ದೆ 625 ಕ್ಕೆ 615 ಅಂಕ ಗಳಿಸಿ ಸಂಸ್ಥೆಗೆ ಪ್ರಥಮ , ಕುಮಾರಿ ಶ್ರೀನಿಧಿ ನಾಯ್ಕ 604 ಅಂಕ ಗಳಿಸಿ ದ್ವಿತೀಯ ಹಾಗೂ ಕುಮಾರ ಸುದರ್ಶನ ಎಂ ಭಟ್ಟ 599 ಅಂಕ ಗಳಿಸಿ ತೃತೀಯ ಸ್ಥಾನ ಗಳಿಸಿದ್ದಾರೆ.
ಈ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ರವಿಕುಮಾರ ಲಕ್ಷಣ ಶಾನಭಾಗ , ಉಪಾಧ್ಯಕ್ಷ ಪ್ರಸನ್ನ ಗುಡಿಗಾರ, ಕಾರ್ಯದರ್ಶಿ ರಾಜೇಂದ್ರಪ್ರಸಾದ ಭಟ್ಟ ಹಾಗೂ ಸಂಸ್ಥೆಯ ಎಲ್ಲಾ ಸದಸ್ಯರೂ ಪ್ರಾಂಶುಪಾಲೆ ವಾಣಿಶ್ರೀ ಹೆಗಡೆ , ಹಿರಿಯ ಶಿಕ್ಷಕ ಎನ್.ಎಸ್.ಭಟ್ಟ , ಮತ್ತು ಎಲ್ಲಾ ಉಪನ್ಯಾಸಕ/ಶಿಕ್ಷಕ, ಹಾಗೂ ಸಿಬ್ಬಂದಿ ವರ್ಗದವರೂ ಅಭಿನಂದಿಸಿದ್ದಾರೆ.
Prathidvani Yellapura