
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ, ಯಲ್ಲಪುರ-ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಯಲ್ಲಾಪುರ ತಾಲೂಕಿನ ಕಿರವತ್ತಿಯಲ್ಲಿ ವಿಜಯ್ ಮಿರಾಶಿ ನೇತೃತ್ವದಲ್ಲಿ ಆಯೋಜಿಸಿದ 2000 ಕ್ಕು ಅಧಿಕ ಮತದಾರರು ಕಾರ್ಯಕರ್ತರ ಸಭೆ ನಡೆಸಿ ಮತಯಾಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಶಿವರಾಮ ಹೆಬ್ಬಾರ್ ಮಾತನಾಡಿ ಇಷ್ಟೊಂದು ಸಂಖ್ಯೆಯ ಮತದಾರರ ಕಾರ್ಯಕರ್ತರ ಬೆಂಬಲ ಕಂಡು ಸಂತಸವಾಗಿದೆ. ಈ ಭಾಗದಲ್ಲಿರುವ ದನಗರಗೌಳಿ ಸಮುದಾಯದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಗೌಳಿಗರ ಪ್ರತಿ ತಾಂಡಾಗಳಿಗೆ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ. ಅದಕ್ಕು ಮಿಗಿಲಾಗಿ ಹಲವು ದಶಕಗಳ ಈ ಭಾಗದ ಬೇಡಿಕೆಯಾದ ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೇರಿಸಿ ಉತ್ತಮ ಆರೋಗ್ಯ ಸೇವೆ ನೀಡಲು ಪಣತೊಡಲಾಗಿದೆ. ನೀವು ಕೊಟ್ಟ ಆಶಿರ್ವಾದ ನನ್ನ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಶ್ರೀರಕ್ಷೆಯಾಗಿದ್ದು ಪ್ರತಿಭಾರಿ ಈ ಪಂಚಾಯತ್ ವ್ಯಾಪ್ತಿ ಲೀಡ್ ನೀಡಿದೆ ಈ ಬಾರಿ ಅದು ದ್ವಿಗುಣವಾಗಬೇಕಿದೆ ಅದಕ್ಕೆ ನನ್ನೆಲ್ಲಾ ದೇವ ದುರ್ಲಬ ಕಾರ್ಯಕರ್ತರ ಶ್ರಮ ಮತ್ತು ಈ ಭಾಗದ ಜನಾನುರಾಗಿ ಮುಖಂಡ ವಿಜಯ್ ಮಿರಾಶಿ ನೇತೃತ್ವ ಪ್ರಮುಖವಾಗಿದ್ದು ನಿಮ್ಮೆಲ್ಲರಿಗು ಕೃತಜ್ಞತೆ ಸಲ್ಲುಸುತ್ತೇನೆ. ನಿಮ್ಮೆಲ್ಲರ ಅಭಿವೃದ್ಧಿಗೆ ಮುಂದೆಯೂ ಶ್ರಮಿಸುತ್ತೇನೆ’ ಎಂದರು.


ಸಭೆಯ ನಂತರ ಸಚಿವ ಶಿವರಾಮ ಹೆಬ್ಬಾರ್, ಮಂಡಲಾಧ್ಯಕ್ಷ ಗೋಪಾಲಕೃಷ್ಣ ಎನ್ ಗಾಂವ್ಕರ್, ಮುಖಂಡ ವಿಜಯ್ ಮಿರಾಶಿ ಉಪಸ್ಥಿತಿಯಲ್ಲಿ ಬೃಹತ್ ರೋಡ್ ಷೋ ನಡೆಯಿತು ಕಟ್ಟಿಗೆ ಸಾಮಿಲ್ ನಿಂದ ಕಿರವತ್ತಿ ಪಟ್ಟಣದಲ್ಲಿ ಮೆರವಣಿಗೆ ಸಾಗಿತು ಈ ಸಂದರ್ಭದಲ್ಲಿ ಸಚಿವ ಶಿವರಾಮ ಹೆಬ್ಬಾರ್ ಯುವಕರನ್ನು ಮೀರಿಸುವಂತೆ ಕಾರ್ಯಕರ್ತರೊಂದಿಗೆ ಕುಣಿತದ ಹೆಜ್ಜೆ ಹಾಕಿ ಉತ್ಸಾಹ ತೋರಿದರು.

ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷರಾದ ಗೋಪಾಲಕೃಷ್ಣ ಎನ್.ಗಾಂವ್ಕರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ವಿಜಯ್ ಮಿರಾಶಿ, ಮಂಡಲ ಉಪಾಧ್ಯಕ್ಷರಾದ ಶಿರಿಷ್ ಪ್ರಭು, ಖಜಾಂಚಿ ಮುರುಳಿ ಹೆಗಡೆ, ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಪ್ರಮುಖರಾದ ರಹಮತ್ ಅಬ್ಬಿಗೇರಿ, ಪ್ರಮುಖರಾದ ಮಾಕು ಕೋಕರೆ, ರಾಜು ಉಪ್ಪಿನ್, ಗ್ರಾಮ ಪಂಚಾಯತ ಅಧ್ಯಕ್ಷರು, ಸದಸ್ಯರು, ಪಕ್ಷದ ವಿವಿಧ ಸ್ತರದ ಮುಖಂಡರು,ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.

Prathidvani Yellapura