
ಧ್ವನಿ.. ಪ್ರತಿಧ್ವನಿ ವಿಶೇಷ. ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ರಾಜ್ಯದಲ್ಲಿ ಚುನಾವಣೆ ಬಂತೆಂದರೆ ಸಾಕು ಏನೆಲ್ಲಾ ಹೊಸ ವ್ಯವಸ್ಥೆ ಜಾರಿಯಾಗಿಬಿಡುತ್ತದೆಂದರೆ. ಕೆಲವು ಕೆಲಸ ಕಾರ್ಯಗಳಿಗೆ ಕಡಿವಾಣ ಬೀಳುತ್ತದೆ. ಅದು ಅನಿವಾರ್ಯವು ಆಗಿರುತ್ತದೆ. ಚುನಾವಣೆಯಲ್ಲಿ ಅಕ್ರಮ ನಡೆಸಲು ಹಣ, ಹೆಂಡ, ಉಡುಗೆ, ಕೊಡುಗೆಗಳು ಸರಬರಾಜಾಗದಂತೆ ತಡೆಯಲು ಪ್ರತಿ ಊರಿನ ಪ್ರಮುಖ ಪ್ರವೇಶ ಸ್ಥಳಗಳಲ್ಲಿ ತಪಾಸಣಾ ಕೇಂದ್ರ ನಿರ್ಮಿಸಿ ಕಟ್ಟುನಿಟ್ಟಿನ ತಪಾಸಣೆ ಮಾಡುತ್ತಾರೆ. ಈ ಸಂದರ್ಭದಲ್ಲಿ ದಾಖಲೆ ಇಲ್ಲದೆ ಸಾಗಿಸುವ ನಗದು ಹಿಡಿಯುತ್ತಿರುವುದರಿಂದ ಸಾಮಾನ್ಯ ವ್ಯಾಪಾರಸ್ಥರಿಗೆ ಅಥವ ಆರೋಗ್ಯ ವಿಚಾರಕ್ಕಾಗಿ ಆಸ್ಪತ್ರೆ ಓಡಾಟ ನಡೆಸುತ್ತಿರುವವರಿಗೆ ಸಮಸ್ಯೆ ಎದುರಾಗಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಈ ಕುರಿತು ಚುನಾವಣ ಆಯೋಗ ಸಮಸ್ಯೆ ಸರಳೀಕರಿಸಲು ಮರ್ಗೋಪಾಯ ಸೂಚಿಸಬೇಕಿದೆ ಎಂಬುದು ಸಾರ್ವಜನಿಕ ಅಭಿಪ್ರಾಯವಾಗಿದೆ.

ಯಲ್ಲಾಪುರದಂತಹ ತಾಲೂಕು ಕೇಂದ್ರದಲ್ಲಿ ಇರುವಂತಹ ಅಂಗಡಿ ಮುಗ್ಗಟ್ಟುಗಳಿಗೆ ಪಕ್ಕದ ಹುಬ್ಬಳ್ಳಿ ಬೆಳಗಾವಿ ಕಡೆಯಿಂದ ಮತ್ತು ಹೊರ ರಾಜ್ಯಗಳಿಂದ ದಿನಸಿ, ಬಟ್ಟೆ, ಕಟ್ಟಡ ನಿರ್ಮಾಣ ಸಾಮಾಗ್ರಿಗಳು ಹಾಗು ಇನ್ನಿತರ ಸಾಮಾಗ್ರಿಗಳನ್ನು ತಂದು ವ್ಯಾಪಾರ ಮಾಡುತ್ತಾರೆ ಅದರ ಹಣದ ವಸೂಲಿಗಾಗಿ ವಾರದಲ್ಲಿ ಹಲವು ಬಾರಿ ಬಂದು ವಸೂಲಿ ಮಾಡಿಕೊಂಡು ಹೊರಡುತ್ತಾರೆ ಈ ವೇಳೆ ಚೆಕ್ ಪೊಸ್ಟ್ ನಲ್ಲಿ ತಪಾಸಣೆ ಮಾಡಿದರೆ ಆಗ ಎಷ್ಟೇ ಹಣ ಸಿಕ್ಕರು ಅದಕ್ಕೆ ದಾಖಲೆ ಇಲ್ಲದೆ ಹೊದರೆ ಅಷ್ಟೇ ಕತೆ.

ಇನ್ನು ಅತ್ಯಂತ ಪ್ರಮುಖ ಸಮಸ್ಯೆ ಎಂದರೆ ದೂರದ ಊರುಗಳಲ್ಲಿ ಆರೋಗ್ಯ ಸಂಬAಧ ಯಾರನ್ನಾದರೂ ದಾಖಲಿಸಿದ್ದರೆ ಅವರÀ ಖರ್ಚುವೆಚ್ಚಕ್ಕಾಗಿ ಹಣದ ಅವಶ್ಯಕತೆ ಇದ್ದು ದನ್ನು ಕೊಂಡೊಯ್ಯುತ್ತಿದ್ದರೆ ತಪಾಸಣೆ ಕೇಂದ್ರದಲ್ಲಿ ತಡೆದು ಆ ಹಣಕ್ಕೆ ದಾಖಲೆ ಕೇಳಿದರೆ ಸಕಾಲಕ್ಕೆ ತರುವುದಾದಾರು ಹೇಗೆ ಅಥವ ದಾಖಲೆಯ ಹುಡುಕಾಟದಲ್ಲಿ ಆಸ್ಪತ್ರೆಯಲ್ಲಿ ಇರುವ ಪೇಷಂಟ್ ಕತೆ ದೇವರೇ ಗತಿ.

ಹಾಗೆಂದು ಅಕ್ರಮ ತಡೆಯಬಾರದೆಂದು ಹೇಳುತ್ತಿಲ್ಲ, ಅಕ್ರಮ ತಡೆದು ಪಾರದರ್ಶಕ ನ್ಯಾಯಸಮ್ಮತ ಚುನಾವಣೆ ನಡೆಯಬೇಕಿದೆ. ಅದೇ ಸಮಯಕ್ಕೆ ನಗದು ಜಪ್ತಿ ವಿಚಾರದಲ್ಲಿ ಕೊಂಚ ಚಿಂತನೆ ಮಾಡಿ ವ್ಯಾಪಾರಸ್ಥರು ಹಾಗು ಆಸ್ಪತ್ರೆ ಸಂಬಂದಿಸಿದ ವಿಚಾರಗಳಿಗೆ ಸರಳ ಮಾರ್ಗೋಪಾಯಗಳನ್ನು ನೀಡಬೇಕಿದೆ ಎಂಬುದು ಹಲವರ ಅನಿಸಿಕೆಯಾಗಿದೆ.

ಚುನಾವಣಾ ಸಂದರ್ಭದಲ್ಲಿ ಕಟ್ಟುನಿಟ್ಟಿನ ತಪಾಸಣೆ ಮಾಡಬೇಕಿರುವುದು ಸೂಕ್ತವಿದೆ. ಆದರೆ ನಿತ್ಯ ವ್ಯಾಪಾರ ಮಾಡುವವರು ಆರೋಗ್ಯ ಸಂಬAಧ ಆಸ್ಪತ್ರೆಗೆ ಅಲೆಯುವವರು, ಇನ್ನಿತರೆ ವ್ಯಾವಹಾರಿಕ ವಿಚಾರಕ್ಕೆ ಸಂಚರಿಸುವವರ ಬಳಿ ಹಣವಿರುವುದು ಸಹಜ, ಕೆಲವೊಮ್ಮೆ ಅವಕ್ಕೆಲ್ಲಾ ದಾಖಲೆ ಒದಗಿಸಬೇಕು ಎಂದಾದರೆ ಸಾಕಷ್ಟು ಸಮಯ ಬೇಕಾಗುತ್ತದೆ. ಆ ವೇಳೆಗೆ ಆಸ್ಪತ್ರೆಯ ವಿಚಾರವಾದರೆ ರೋಗಿಯ ಸ್ಥಿತಿಯೇನು? ವ್ಯಾವಹಾರಿಕ ವಿಚಾರವಾದರೆ ಅದನ್ನೇ ನಂಬಿ ಬದುಕು ನಡೆಸುವ ಅಂಗಡಿಗಳ ಕಥೆ ಏನು? ಇದಕ್ಕೆಲ್ಲಾ ಪರಿಹಾರ ಸೂಚಿಸಬೇಕಿದೆ. ಕನಿಷ್ಠ ಚುನಾವಣೆ ಮುಕ್ತಾಯವಾಗುವವರೆಗೂ ಆಯಾ ತಾಲೂಕಿನ ತಹಸೀಲ್ದಾರರ ಅನುಮತಿಯಲ್ಲಿ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹಣ ಕೊಂಡೊಯ್ಯಲು ಅನುಮತಿ ಪತ್ರ ನೀಡುವಂತಾದರೆ ಬಹಳ ಮಂದಿಗೆ ಸಹಾಯವಾಗಲಿದೆ. ನಂತರದಲ್ಲಿ ಅನುಮತಿ ಪಡೆದ ಹಣಕ್ಕೆ ದಾಖಲೆ ಒದಗಿಸುವುದು ಸಾರ್ವಜನಿಕರ ಕರ್ತವ್ಯವಾಗಲಿದೆ. ಈ ನಿಟ್ಟಿನಲ್ಲಿ ಸಂಬAಧಿಸಿದ ಅಧಿಕಾರಿಗಳು ಗಮನಹರಿಸಬೇಕಿದೆ ಎಂಬುದು ಹಲವು ವ್ಯಾಪಾರಸ್ಥರ ಮತ್ತು ಹುಬ್ಬಳ್ಳಿ, ಧಾರವಾಡ, ಮಣಿಪಾಲ, ಮಂಗಳೂರು, ಬೆಂಗಳೂರು ಹಾಗೂ ಇನ್ನಿತರೆ ಕಡೆಗಳಲ್ಲಿ ಆಸ್ಪತ್ರೆಗೆ ಓಡಾಡುವ ಸಾರ್ವಜನಿಕರ ಮಾತಾಗಿದೆ.


Prathidvani Yellapura