
ಯಲ್ಲಾಪುರ : ಕಳೆದೆರಡು ದಿನಗಳ ಹಿಂದೆ ಮನೆಯಿಂದಲೇ ಮತದಾನ ಮಾಡಿದ್ದ ತಾಲೂಕಿನ ಹಿತ್ಲಳ್ಳಿ ಮತದಾನ ಕೇಂದ್ರದ ವ್ಯಾಪ್ತಿಯ ಗೋಪಾಲಕೃಷ್ಣ ಹೆಗಡೆಯವರ 104 ವರ್ಷದ ಸುಬ್ಬಿ ಹೆಗಡೆ ಹಾಗೂ ಇವರ ಸಹೋದರಿ 94 ವರ್ಷದ ಗೌರಿ ಹೆಗಡೆ ಇವರ ಇನ್ನೋರ್ವ ಸಹೋದರಿ 92 ವರ್ಷದ ಭಟ್ ಸಾಕಿನ್ ಕಾನಗೊಡ್ ರವರು ತಮ್ಮ ಮಗನ ಸಹಾಯದಿಂದ ಮೇ 3 ರಂದು ರಂದು ಮತಚಲಾಯಿಸಿದರು.
ಈ ಸಂದರ್ಭದಲ್ಲಿ ಸೆಕ್ಟರ್ -11 ರ ಅಧಿಕಾರಿ ಎನ್.ಆರ್ ಹೆಗಡೆ ಹಾಗೂ ಅವರ ತಂಡ ಮತದಾನ ಸಂದರ್ಭದಲ್ಲಿ ಕಾರ್ಯ ನಿರ್ವಹಿಸಿದರು.

ನಡೆದು ಮತದಾನ ಕೇಂದ್ರಕ್ಕೆ ಬಂದು ಮತ ಚಲಾಯಿಸಲು ಸಾದ್ಯವಾಗದವರು ಮತ್ತು ವಿಶೇಷ ಚೇತನರಿಗೆಂದೇ ಚುನಾವಣ ಆಯೋಗ ಹೊಸ ವ್ಯವಸ್ಥೆ ಮಾಡಿ 80 ವರ್ಷ ದಾಟಿದವರಿಗೆ ಮನೆಯಿಂದಲೇ ಮತಚಲಾಯಿಸುವ ಅವಕಶ ನೀಡಿದೆ. ಇದನ್ನು ಚುನಾವಣೆ ಕಾರ್ಯದಲ್ಲಿ ತೊಡಗಿಸಿಕೊಂಡ ಅಧಿಕಾರಿ ವರ್ಗ ಶ್ರಮವಯಿಸಿ ಗುಡ್ಡಗಾಡು, ಗ್ರಾಮೀಣ ಪ್ರದೇಶದ ಅರಣ್ಯದಲ್ಲಿರುವ ಮನೆಗಳು ಅತ್ಯಂತ ಕಠಿಣ ಪ್ರದೇಶಗಳಿಗೆ ತೆರಳಿ ಮತದಾನ ಮಾಡಿಸುತ್ತಿದ್ದಾರೆ.

ಈ ವ್ಯವಸ್ಥೆ ಕಂಡು ಕೈ ಕಾಲು ಗಟ್ಟಿ ಇರುವ ಯುವ ಜನಾಂಗ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೆ ಮತದಾನದ ದಿನವನ್ನು ಮೋಜುಮಸ್ತಿಗೆ ಅಥವ ಚೆನ್ನಾಗಿ ನಿದ್ದೆ ಮಾಡಲು ಉಪಯೋಗಿಸಿದರೆ ಮುಂದೆ ಬರಲಿರುವ ಸರ್ಕಾರದ ಲೋಪದೋಷಗಳನ್ನು ಪ್ರಶ್ನಿಸುವ ಹಕ್ಕಿರುವುದಿಲ್ಲ. ಎಲ್ಲಿಯವರೆಗೆ ಸರ್ವ ಜನತೆ ಪ್ರಜ್ಞಾವಂತರಾಗಿ ನಮ್ಮ ಸಂವಿಧಾನ ಬದ್ದ ಹಕ್ಕಾಗಿರುವ ಮತ ಚಲಾಯಿಸುವ ಹಕ್ಕು ಪೂರೈಸುವುದಿಲ್ಲವೊ ಅಲ್ಲಿಯವರೆಗೆ ಉತ್ತಮ ಜನಪರ ಭ್ರಷ್ಟಾಚಾರ ಮುಕ್ತ ಸರ್ಕಾರ ಸ್ಥಾಪನೆ ಸಾದ್ಯವಿಲ್ಲ.

ಬನ್ನಿ ನಮ್ಮ ಕರ್ತವ್ಯ ನಾವು ನಿರ್ವಹಿಸೋಣ ಮತ್ತು ಕರ್ತವ್ಯ ನಿರ್ವಹಿಸದವರಲ್ಲಿ ಜಾಗೃತಿ ಮೂಡಿಸಿ ಮತದಾನ ಮಾಡುವಂತೆ ಪ್ರೇರೇಪಿಸೋಣ. ಒಟ್ಟಿನಲ್ಲಿ ನಮ್ಮ ನೆಲದ ಪ್ರಜಾಪ್ರಭುತ್ವದ ಹಬ್ಬವನ್ನು ಮತದಾನದ ಮೂಲಕ ಆಚರಿಸೋಣ.

ಚುನಾವಣೆ ಎಂದರೆ ಅಧಿಕಾರಿಗಳಿಗೆ ಕರ್ತವ್ಯ ಅಭ್ಯರ್ಥಿಗಳಿಗೆ ಸೋಲು ಗೆಲುವು ಆದರೆ ಪ್ರಜೆಗಳಿಗೆ ಜೀವನ ದೇಶದ ಭವಿಷ್ಯ ತಪ್ಪದೆ ಮತ ಚಲಾಯಿಸಿ

Prathidvani Yellapura