
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ…………
ಪ್ರತಿಧ್ವನಿ,ಯಲ್ಲಾಪುರ: ಹವ್ಯಕ ಭವನದಲ್ಲಿ ಭಾನುವಾರ ನಡೆದ ಅಖಿಲ ಹವ್ಯಕ ಮಹಾಸಭಾದ ‘ಸಂಸ್ಥಾಪನೋತ್ಸವ’ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಾಧನೆಯ ಜೊತೆಗೆ ಇತರ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನೀಡುವ ‘ಹವ್ಯಕ ಪಲ್ಲವ’ ಪುರಸ್ಕಾರವನ್ನು ಯಲ್ಲಾಪುರದ ತೇಜಸ್ವಿ ಮದ್ಗುಣಿ ಗೆ ನೀಡಿಗೌರವಿಸಲಾಯಿತು.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಈಶ್ವರ ದೈತೋಟ, ಎಂ.ಕೆ.ಭಾಸ್ಕರ್ ರಾವ್, ಅಖಿಲ ಹವ್ಯಕ ಮಹಾ ಸಭಾದ ಅಧ್ಯಕ್ಷ ಡಾ. ಗಿರಿಧರ ಕಜೆ ಉಪಸ್ಥಿತರಿದ್ದರು. ತೇಜಸ್ವಿ ಯಲ್ಲಾಪುರದ ಪತ್ರಕರ್ತ ನಾಗರಾಜ ಮದ್ಗುಣಿ ಹಾಗೂ ಡಾ. ಜಿ.ಪಿ. ಭಟ್ಟ ಮದ್ಗುಣಿ ಸ್ಮಾರಕ ಆಯುರ್ ಸೇವಾ ಭವನದ ವೈದ್ಯೆ ಡಾ. ಸುಚೇತಾ ಮದ್ಗುಣಿ ಇವರ ಪುತ್ರನಾಗಿದ್ದಾನೆ.
ತೇಜಸ್ವಿ ಮದ್ಗುಣಿ ಯಲ್ಲಾಪುರ ತಾಲೂಕಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ವೈ.ಟಿ.ಎಸ್.ಎಸ್ ಸಂಸ್ಥೆ ವಿದ್ಯಾರ್ಥಿ ಯಾಗಿದ್ದು ಬುದ್ದಿಮತ್ತೆಗೆ ಸಂಬಂದಿಸಿದ ಶೈಕ್ಷಣಿಕ ಚಟುವಟಿಕೆಯಲ್ಲಿ ಚುಕುಕುತನಹೊಂದಿದ್ದ ತೇಜಸ್ವಿ ಕಲೆ ಮತ್ತು ಕ್ರೀಡೆಗಳಲ್ಲಿ ಆಸಕ್ತಿ ಹೊಂದಿದ್ದಾನೆ. ಸದ್ಯ ಧಾರವಾಡದಲ್ಲಿ ವಿಧ್ಯಾಭ್ಯಾಸ ಮುಂದುವರೆಸಿದ್ದು ಇನ್ನಷ್ಟು ಹೆಚ್ಚಿನ ಸಾಧನೆ ಮಾಡಲೆಂದು ಹಿತೈಷಿಗಳು, ಪ್ರಮುಖರು, ಕುಟುಂಬದವರು ಹರಸಿ ಹಾರೈಸಿದ್ದಾರೆ.

ಮಕ್ಕಳ ಸಾಧನೆಮಾಡಿ ಸಮಾಜ ಅಥವಾ ಸಂಘ ಸಂಸ್ಥೆಗಳು ಗುರುತಿಸಿ ಪ್ರೋತ್ಸಾಹಿಸಿ ಗೌರವಿಸಿದರೆ ತಂದೆತಾಯಿಗಳಿಗೆ ಆಗುವ ಆನಂದ ಅಪರಿಮಿತವಾದದ್ದು. ಮಕ್ಕಳು ಸಾತ್ವಿಕ ಸಾಧನೆಗಳನ್ನು ಮಾಡಿದರೆ ಅದಕ್ಕಿಂತ ತಂದೆತಾಯಿಗಳಿಗೆ ನೀಡುವ ಉನ್ನತ ದರ್ಜೆಯ ಕೊಡುಗೆ ಮತ್ತೊಂದಿಲ್ಲ. ನಮ್ಮ ಮಗನಿಗೆ ಸಂಧ ಗೌರವಕ್ಕೆ ಕಾರಣೀಬೂತರಾದ ಸರ್ವರಿಗು ಅತಾನಂತ ಧನ್ಯವಾದಗಳು. ನಾಗರಾಜ್ ಮದ್ಗುಣಿ, ಪತ್ರಕರ್ತ. ಡಾ, ಸುಚೇತ ಮದ್ಗುಣಿ


Prathidvani Yellapura