
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ರವೀಂದ್ರನಗರದಲ್ಲಿರುವ ಶ್ರೀ ಆಂಜನೇಯ ದೇವರ ಪಲ್ಲಕ್ಕಿ ನಿರ್ಮಾಣಕ್ಕಾಗಿ ಶ್ರೀ ಗುರುಸಿದ್ಧೇಶ್ವರ ನಾಟ್ಯ ಸಂಘದ ಸಹಕಾರದಲ್ಲಿ “ಚಿನ್ನದ ಗೊಂಬೆ” ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು.
ಪಟ್ಟಣದ ಕೆಇಬಿ ಮುಂಭಾಗದ ಮದ್ಗುಣಿ ಕಾಂಪ್ಲೆಕ್ಸ್ ಆವರಣದಲ್ಲಿ ಮಂಡಲಗಿರಿಯ ಶ್ರೀ ಗುರುಸಿದ್ದೇಶ್ವರ ನಾಟ್ಯ ಕಂಪನಿಯವರ ವತಿಯಿಂದ ಚಿನ್ನದ ಗೊಂಬೆ ಎಂಬ ಸುಂದರ ಸಾಮಾಜಿಕ ಹಾಸ್ಯಭರಿತ ನಾಟಕವನ್ನು ಪ್ರದರ್ಶಿಸಲಾಯಿತು.

ಪಲ್ಲಕ್ಕಿ ನಿರ್ಮಾಣದ ಧಾರ್ಮಿಕ ಸೇವಾಕಾರ್ಯದಲ್ಲಿ ಕೈಜೋಡಿಸಿದ ನಾಟಕ ಕಂಪನಿಯ ಕಲಾವಿದರಿಗೂ ಹಾಗೂ ನಾಟಕ ನಡೆಸಲು ಸ್ಥಳಾವಕಾಶ ನೀಡಿದ ವೇಣುಗೋಪಾಲ ಮದ್ಗುಣಿ ಅವರಿಗೂ ರವೀಂದ್ರನಗರದ ಶ್ರೀ ಆಂಜನೇಯ ದೇವಸ್ಥಾನ ಕಮಿಟಿ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಮಿಟಿಯ ಅಧ್ಯಕ್ಷ ಪ್ರಶಾಂತ ಡಿ ಜೋಗಳೇಕರ , ಉಪಾಧ್ಯಕ್ಷ ಮಹಾದೇವ ಭೋವಿವಡ್ಡರ, ಸದಸ್ಯರಾದ ರಾಜು ಬದ್ದಿ, ಅನಿಲ ಜೋಗಳೇಕರ, ಲೋಕನಾಥ ಗಾಂವ್ಕರ್, ಮಹೇಶ್ ಆಲ್ಮಠ, ಶಿವರಾಜ ಭೋವಿವಡ್ಡರ, ಕುಮುದಾ ಸಾಣೆ, ಸುಮಂಗಲಾ ಮರಾಠಿ ನಾಟಕ ಕಂಪನಿಯ ಎಲ್ಲ ಕಲಾವಿದರು ಉಪಸ್ಥಿತರಿದ್ದರು.
Prathidvani Yellapura