Breaking News

Yearly Archives: 2023

ಆರೋಗ್ಯದ ಸಮಸ್ಯೆಯಿಂದ ನೇಣಿಗೆ ಶರಣಾದ ಭರತನಳ್ಳಿ ಶಾಲೆ ಶಿಕ್ಷಕಿ

ಯಲ್ಲಾಪುರ : ತಾಲೂಕಿನ ಕುಂದರಗಿ ಗ್ರಾ.ಪಂ ವ್ಯಾಪ್ತಿಯ ಭರತನಹಳ್ಳಿಯ ಸ.ಹಿ.ಪ್ರಾ ಶಾಲಾ ಶಿಕ್ಷಕಿಯಾಗಿದ್ದ ಸವಿತಾ ಪ್ರೇಮಚಂದ್ರ ಗೋಂದಿ (38) ಮಾವಿನಕಟ್ಟೆಯ ತಮ್ಮ ಸ್ವಗೃಹದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಸಂಭವಿಸಿದೆ. ಅನೇಕ ವರ್ಷಗಳಿಂದ ಥೈರಾಯ್ಡ್ ಖಾಯಿಲೆಯಿಂದ ಬಳಲುತ್ತಿದ್ದ ಇವರು ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ನೇಣಿಗೆ ಶರಣಾಗಿದ್ದಾರೆ.ಓರ್ವ ಸಹೋದರ, ಮೂವರು ಸಹೋದರಿಯರು ಹಾಗೂ ತಾಯಿ ಅಲ್ಲದೇ ಅಪಾರ ಸಂಖ್ಯೆಯ ಬಂಧುಬಳಗ, ಶಿಷ್ಯರನ್ನು ಇವರು ಅಗಲಿದ್ದಾರೆ.

Read More »

ಡೋಮಗೇರಿಯಲ್ಲೊಂದು ಕಳ್ಳತನ ; 1,40,000 ಮೌಲ್ಯದ ನಗ-ನಾಣ್ಯ ಕದ್ದೊಯ್ದ ಕಳ್ಳರು

ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಮದನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಡೋಮಗೇರಿ ಗ್ರಾಮದಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಬಂಗಾರದ ಒಡವೆ, ನಗದು ಸೇರಿದಂತೆ 1 ಲಕ್ಷದ 40 ಸಾವಿರ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾದ ಘಟನೆ ನಡೆದಿದೆ. ಕೃಷಿ ಕಾಯಕ ಮಾಡುವ ಡೋಮಗೇರಿ ನಿವಾಸಿ ಪ್ರದೀಪ ದಿವಾಕರ ಹೆಗಡೆ ಎಂಬುವರ ವಾಸದ ಮನೆಯಲ್ಲಿ ಮೇ 24 ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಹೆಂಚನ್ನು ತೆಗೆದು ಒಳನುಸುಳಿ ಕಪಾಟಿನ ಬಾಗಿಲು …

Read More »

ಯಲ್ಲಾಪುರ ಪಟ್ಟಣ ಪಂಚಾಯತ್ ನಿಂದ ತ್ಯಾಜ್ಯ ಸಂಸ್ಕರಣೆಗೆ ಯಂತ್ರಗಳ ಮೊರೆ..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಆನಗೋಡು ಗ್ರಾಮ ಪಂಚಾಯತ ವ್ಯಾಪ್ತಿಯ ಸಾತೊಡ್ಡಿ ತೆರಳುವ ಮಾರ್ಗ ಮದ್ಯೆ ಶಿಸ್ತುಮುಡಿ ಎಂಬಲ್ಲಿ ಯಲ್ಲಾಪುರ ಪಟ್ಟಣ ಪಂಚಾಯತ್ ತ್ಯಾಜ್ಯ ಸಂಸ್ಕರಣ ಘಟಕವಿದ್ದು ಪಟ್ಟಣದಲ್ಲಿ ನಿತ್ಯವು ಸಂಗ್ರಹವಾಗುವ ರಾಶಿ ರಾಶಿ ಕಸವನ್ನು ತಂದು ಇಲ್ಲಿ ಸಂಸ್ಕರಣೆ ಮಾಡಲಾಗುತ್ತಿತ್ತು. ಸದ್ಯ ಮಾನವನ ಶಕ್ತಿ ಹೆಚ್ಚಾಗಿ ಬಳಸದೆ ಅತ್ಯಾಧುನಿಕ ತಂತ್ರಜ್ಞಾನದ ಕಸವಿಂಗಡಣೆ ಯಂತ್ರ ಅಳವಡಿಸಲಾಗುತ್ತಿದ್ದು ಶೀಘ್ರದಲ್ಲೇ ಕಸದಿಂದ ರಸ ತೆಗೆಯುವ ಪ್ರಕ್ರಿಯೆ …

Read More »

ನಿಸರ್ಗ ಸ್ವರ್ಗ ಸಾತೊಡ್ಡಿ ಜಲಪಾತ ಆಗಬೇಕಿದೆ ವಿಶ್ವ ವಿಖ್ಯಾತ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಬಿಸಿಲಿನ ಜಳಕ್ಕೆ ನೀರಿಗೆ ಮೈಯ್ಯೊಡ್ಡಲು ನಿಸರ್ಗ ನಿರ್ಮಿತ ರಮಣೀಯ ತಾಣ ಸಾತೊಡ್ಡಿ ಜಲಪಾತಕ್ಕೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಪ್ರಕೃತಿ ಸೌಂದರ್ಯದ ಹಸಿರು ಮಡಿಲೆಂದೇ ಖ್ಯಾತಿ ಪಡೆದ ಜಲಪಾತಗಳ ಆಗರ ಯಲ್ಲಾಪುರ ತಾಲೂಕು ಪ್ರವಾಸಿಗರ ಕೈ ಬೀಸಿ ಕರೆಯುವ ರಮಣೀಯ ತಾಣವಾಗಿದೆ. ಇಲ್ಲಿನ ಜಲಪಾತಗಳು ದೇಶದ ನಾನಾ ಭಾಗದ ಜನರಿಗೆ ಬಲು ಪ್ರಿಯವಾಗಿದೆ. ಮೇಲಿನಿಂದ …

Read More »

“ಗೃಹಜ್ಯೋತಿ” ಯೋಜನೆಯ ಸಮಗ್ರ ಮಾಹಿತಿ ಜನತೆಗೆ ನೀಡಿ ವಿದ್ಯುತ್ ಇಲಾಖೆ ಸಿಬ್ಬಂದಿಗಳ ಮೇಲಿನ ಹಲ್ಲೆ ತಪ್ಪಿಸಿ. ಯಲ್ಲಾಪುರ ವಿದ್ಯುತ್ ನೌಕರರ ಮನವಿ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ನೀಡಿದ್ದು ಅದರಲ್ಲಿ “ಗೃಹ ಜ್ಯೋತಿ” ಕೂಡ ಒಂದಾಗಿದೆ. ಇದರ ಪ್ರಕಾರ ಪ್ರತಿ ಮನೆಗೆ 200 ಯುನಿಟ್ ವರೆಗೆ ಕರೆಂಟ್ ಬಿಲ್ ಉಚಿತ ಎಂಬುದಾಗಿತ್ತು.ಇದೀಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಕೊಟ್ಟ ಭರವಸೆಯನ್ನಾಧರಿಸಿ ರಾಜ್ಯದ ವಿದ್ಯುತ್ ಗ್ರಾಹಕರು ವಿದ್ಯುತ್ ಬಿಲ್ ಭರಿಸಲು ನಿರಾಕರಿಸುತ್ತಿದ್ದು ಬಿಲ್ ವಸೂಲಿಗೆ ತೆರಳುತ್ತಿರುವ ವಿದ್ಯುತ್ …

Read More »

ಗಾಳಿ ಮಳೆಗೆ ಕೋಟೆಮನೆಯಲ್ಲಿ ಹಾನಿ

ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಉಮ್ಮಚ್ಗಿ ಪಂಚಾಯತ ವ್ಯಾಪ್ತಿಯ ಕೋಟೆಮನೆಯಲ್ಲಿ ಮಂಗಳವಾರ ರಾತ್ರಿ ಬೀಸಿದ ಬಿರುಗಾಳಿ,ಮಳೆಯ ರಭಸಕ್ಕೆ ಆರೇಳು ಮನೆಗಳಿಗೆ ಹೆಚ್ಚಿನ ಪ್ರಮಾಣದ ಹಾನಿಯಾದ ಘಟನೆ ಸಂಭವಿಸಿರುತ್ತದೆ.ಗೌರಿ ರಾಮಾ ಸಿದ್ದಿ, ರುಕ್ಮಿಣಿ ಕೃಷ್ಣಾ ಸಿದ್ದಿ,ದೇವಕಿ ನಾರಾಯಣ ಪಟಗಾರ, ನಾರಾಯಣ ಮಡೂರ ಪೂಜಾರಿ, ಕೃಷ್ಣ ನಾಗಾ ಸಿದ್ದಿ ಮೊದಲಾದವರ ಮನೆಗಳ ಹೆಂಚು ಮತ್ತು ತಗಡಿನ ಶೀಟುಗಳು ಬಿರುಗಾಳಿಗೆ ಹಾರಿ ಹೋಗಿರುತ್ತವೆ. ಕೋಟೆಮನೆ ಅಂಗನವಾಡಿ ಕೇಂದ್ರಕ್ಕೂ ಬಿರುಗಾಳಿಯಿಂದ ಹಾನಿಯಾಗಿರುತ್ತದೆ. ರಾತ್ರಿ ಘಟನೆ ನಡೆದ ತಕ್ಷಣ …

Read More »

ಲೇಟಾಗಿ ಬಂದು ರೇಟಾದ ಮಾವು

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಹಣ್ಣುಗಳ ರಾಜ ಮಾವು, ವರ್ಷಕ್ಕೊಮ್ಮೆ ಮಾರುಕಟ್ಟೆ ಪ್ರವೇಶಿಸಿ ಮಾವಿನ ಹಣ್ಣಿ ಪ್ರಿಯರಿಗೆ ನಾಲಿಗೆಗೆ ರುಚಿ ಹತ್ತಿಸುತ್ತದೆ. ಈ ಬಾರಿ ಅದೇಕೋ ಮಾರುಕಟ್ಟೆಗೆ ಮಾವು ತಡವಾಗಿ ಬಂದಿದ್ದು ಹೆಚ್ಚಿನ ದರಕ್ಕೆ ಬಿಕರಿಯಾಗುತ್ತಿದೆ.ಘಟ್ಟದ ಕೆಳಗಿನ ಕರೆ ಈಶಾಡ ಮಾವು , ಘಟ್ಟದ ಮೇಲಿನವರಿಗೆ ಅತ್ಯಂತ ಪ್ರಿಯವಾದುದು. ಸದ್ಯ ಮಾವಿನ ಮಾರುಕಟ್ಟೆಯಲ್ಲಿ ಆಪೂಸ್, ಮಲ್ಲಿಕಾ, ಸೆಂದೂಲಾ, ಕಸಿ ಮುಂತಾದ ಜಾತಿಯ ಮಾವು ಮಾರಾಟವಾಗುತ್ತಿದ್ದು …

Read More »

ಮುರಿದು ಬಿದ್ದಿರುವುದು ಫಲಕವೆ ಆದರು ಗೌರವ ತಗ್ಗುವುದು ಇಲಾಖೆಗೆ ಅದರ ಅನ್ನ ತಿನ್ನುವ ಅಧಿಕಾರಿಗಳಿಗೆ..!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಸರ್ಕಾರದ್ದು ಎಂದ ಕೂಡಲೇ ಆಲಸ್ಯ, ನಿರ್ಲಕ್ಷ್ಯ ಬೇಜವಾಬ್ದಾರಿ ಮತ್ತು ನನ್ನದಲ್ಲ ಎಂಬ ಭಾವ ಅದೇಕೋ ಬಹುಸಮಯದಿಂದ ಕೆಲವು ಇಲಾಖೆ ಮತ್ತು ಅಧಿಕಾರಿಗಳ ತಲೆಯಲ್ಲಿ ತುಂಬಿಬಿಟ್ಟಿದೆ. ಅದಕ್ಕೆ ತಾಜಾ ಉದಾಹರಣೆ; ಯಲ್ಲಾಪುರದ ಹಳೆಯ ತಹಸೀಲ್ದಾರ ಕಚೇರಿ ಆವರಣದಲ್ಲಿರುವ ಉಪ ಖಜಾನೆ ಕಚೇರಿಯ ನಾಮಫಲಕ ಬಹು ಸಮಯದಿಂದ ಮುರಿದು ಬಿದ್ದಿದ್ದು ಪ್ರತಿ ನಿತ್ಯ ಅದೇ ಕಚೇರಿ ಸಂಬಧಿಸಿದ ಅಧಿಕಾರಿಗಳು, ಸಿಬ್ಬಂದಿ ವರ್ಗ …

Read More »

ಶ್ರೀಮಾತಾ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘದ ದ್ವಿದಶಮಾನೋತ್ಸವ ಸಂಭ್ರಮ

ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಉಮ್ಮಚಗಿಯಲ್ಲಿ ಕಾರ್ಯಾಲಯವನ್ನು ಹೊಂದಿ ಯಲ್ಲಾಪುರ, ಶಿರಸಿ, ಮುಂಡಗೋಡು ಹಾಗೂ ಹಿರೇಸರ (ಪತ್ತೇತರ) ಶಾಖೆಗಳನ್ನು ಹೊಂದಿರುವ ಶ್ರೀಮಾತಾ ವಿವಿಧ್ಧೋದ್ದೇಶಗಳ ಸೌಹಾರ್ದ ಸಹಕಾರಿ (ಹಿರೇಸರ) ಯು ದ್ವಿದಶಮಾನೋತ್ಸವ ವರ್ಷಾಚರಣೆಯ ಸಂಭ್ರಮದ ಹೊಸ್ತಿಲಲ್ಲಿದೆ ಎಂದು ಸಹಕಾರಿಯ ಅಧ್ಯಕ್ಷ ಜಿ.ಎನ್.ಹೆಗಡೆ ಹಿರೇಸರ ಹೇಳಿದರು.ಅವರು ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಕರೆದಿದ್ದ ಸುದ್ಧಿಗೋಷ್ಟಿಯಲ್ಲಿ ದ್ವಿದಶಮಾನೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ, ಮಾಧ್ಯಮದವರಿಗೆ ಮಾಹಿತಿ ನೀಡುತ್ತಿದ್ದರು.ಸುಮಾರು 20 ವರ್ಷಗಳ ಹಿಂದೆ (2004) ಅತ್ಯಂತ ಆರ್ಥಿಕ …

Read More »

ಯಲ್ಲಾಪುರ ಅರ್ಬನ್ ಬ್ಯಾಂಕ್ ಗೆ 25 ರ ಸಂಭ್ರಮ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ: ಯಲ್ಲಾಪುರ ನೆಲದ ಶಕ್ತಿ ಮಾತೆ ತಾಯಿ ಗ್ರಾಮದೇವಿ ಅನುಗ್ರಹದಲ್ಲಿ ಆರ್ಥಿಕ ವಹಿವಾಟಿಗೆಂದು 25 ವರ್ಷಗಳ ಹಿಂದೆ ಸದುದ್ದೇಶದಿಂದ 3 ಲಕ್ಷದಿಂದ ಪ್ರಾರಂಭವಾದ ಪುಟ್ಟ ಸಂಸ್ಥೆಯೊಂದು ಬೃಹದಾಕಾರವಾಗಿ ಬೆಳೆದು ಉತ್ತರ ಕನ್ನಡ ಜಿಲ್ಲೆಯಾದ್ಯಂತ ಆರು ಶಾಖೆಗಳನ್ನು ಹೊಂದಿದ್ದು ಪ್ರಸಕ್ತ ಆರ್ಥಿಕ ವರ್ಷದ ಕೊನೆಯಲ್ಲಿ 59 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು 70 ಲಕ್ಷ ಲಾಭ ಗಳಿಸಿದೆ. ದೈವಾನುಗ್ರಹದಿಂದ ಗ್ರಾಹಕರ ನಂಬಿಕೆ , …

Read More »