ಪ್ರತಿಧ್ವನಿ,ಯಲ್ಲಾಪುರ : ತಾಲ್ಲೂಕಿನ ಅತ್ಯಂತ ಹಳೆಯ ಹಾಗು ಪ್ರಥಮ ಗಜಾನನೋತ್ಸವ ನಡೆಸುತ್ತಾ ಬಂದಿರುವ ಪ್ರತಿಷ್ಠಿತ ತಿಲಕ್ ಚೌಕ್ ಸಾರ್ವಜನಿಕ ಗಜಾನನೋತ್ಸವ ಆವಾರದಲ್ಲಿ ಮಂಗಳವಾರ ಮಹಾ ಅನ್ನ ಪ್ರಸಾದ ಸೇವೆ ಯಶಸ್ವಿಯಾಗಿ ನೆರವೇರಿತು. ವರ್ಷಂ ಪ್ರತಿ ನಡೆಸುವ ಚೌತಿ ಗಣಪತಿ ಸಂಭ್ರಮೋತ್ಸವದಲ್ಲಿ ತಿಲಕ್ ಚೌಕ್ ಸಮಿತಿ ಆವಾರದಲ್ಲಿ ವಿಶೇಷ ಅನ್ನ ಸಂತರ್ಪಣೆ ಶ್ರದ್ದಾ ಭಕ್ತಿಯಿಂದ ನೆರವೇರುತ್ತ ಹೆಸರುವಾಸಿಯಾಗಿದೆ ಈ ಬಾರಿಯು ಸಹಸ್ರಾರು ಸಂಖ್ಯೆಯಲ್ಲಿ ತಾಲ್ಲೂಕಿನ ಜನತೆ ಅನ್ನ ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು. …
Read More »Monthly Archives: September 2023
ಗ್ರಾಮದೇವಿ ನೆಲೆನಿಂತ ಸುಕ್ಷೇತ್ರ ಯಲ್ಲಾಪುರದಲ್ಲಿ ಪ್ರತಿಷ್ಟಾಪಿತ ಗಣಪತಿಗಳ ವೈಭವ
ಎಂಟನೆ ತರಗತಿ ಓದುತ್ತಿರುವ ಶಿರಸಿ ಪೋರ ” ಶ್ರೀಧರ ಸಂಜೀವ ಕೆರೆಕರ “ ಕೈಚಳಕದಲ್ಲಿ ಮೂಡಿದ ಪರಿಸರ ಸ್ನೇಹಿ ಗಣಪ ಯಲ್ಲಾಪುರದ ಜಿಲ್ಲಾ ಪಂಚಾಯತ ಇಂಜಿನಿಯರಿಂಗ್ ಉಪವಿಭಾಗದಲ್ಲಿ ಪ್ರತಿಷ್ಟಾಪನೆಗೊಂಡಿದೆ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್, ಪಂಚಾಯತ್ ರಾಜ್ ಇಂಜಿನೀಯರಿಂಗ್ ಉಪ ವಿಭಾಗ ಯಲ್ಲಾಪುರ ಕಛೇರಿಯಲ್ಲಿ ಗಣೇಶ ಚತುರ್ಥಿ ಉತ್ಸವ ವಿಜ್ರಂಭಣೆಯಿಂದ ನೆರವೆರಿಸಲಾಗುತ್ತಿದೆ. ವಿಶೇಷವೆಂದರೆ ಕಳೆದ ವರ್ಷದಂತೆ ಈ ವರ್ಷವು ಕೂಡ ಚಂದನ ಆಂಗ್ಲ ಮಾಧ್ಯಮ ಪ್ರೌಢಶಾಲೆ, …
Read More »ಸುರಭಿ ಸೇವಾ ಚಾರಿಟಬಲ್ ಟ್ರಸ್ಟ್ ಯಲ್ಲಾಪುರ ಮಹಿಳಾ ಘಟಕದಿಂದ ಕೃಷ್ಣ ವೇಷ ಸ್ಪರ್ಧೆ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಕೋಟೆ ಕರಿಯಮ್ಮ ದೇವಸ್ಥಾನದ ಆವರಣದಲ್ಲಿ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ರಾಧಾ-ಕೃಷ್ಣ ವೇಷ ಸ್ಪರ್ಧೆ ಏರ್ಪಡಿಸಲಾಗಿತ್ತು. ಪಟ್ಟಣ ವ್ಯಾಪ್ತಿಯ ಪುಟಾಣಿಗಳು ಮುದ್ದಾದ ರಾಧೆ ಹಾಗೂ ಕೃಷ್ಣ ವೇಷ ತೊಟ್ಟು ಸ್ಪರ್ಧೆಯಲ್ಲಿ ಪಾಲ್ಗೊಂಡು ನೋಡುಗರನ್ನು ರಂಜಿಸಿದರು. ಮಾಸ್ಟರ್ ಆರ್ಟ್ಸ್ ಮಾಲೀಕ ಮಹೇಶ್ ಆಲ್ಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸುರಭಿ ಮಹಿಳಾ ಘಟಕದ ಅಧ್ಯಕ್ಷೆ …
Read More »ಪ.ಪಂ ಸದಸ್ಯ ಸೋಮೇಶ್ವರ ನಾಯ್ಕ ಸಲ್ಲಿಸಿದ ಪಟ್ಟಣದ ೧೧ ಸಮಸ್ಯೆಗಳ ಪಟ್ಟಿ..!!!
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಅವ್ಯವಸ್ಥೆಗಳು ತಾಂಡವವಾಡುತ್ತಿದ್ದು ಶೀಘ್ರ ಪರಿಹರಿಸುವಂತೆ ಮುಖ್ಯಾಧಿಕಾರಿ ಸುನಿಲ್ ಗಾವಡೆಯವರಿಗೆ ರವೀಂದ್ರನಗರ ಪಟ್ಟಣ ಪಂಚಾಯತ ಸದಸ್ಯ ಸೋಮೇಶ್ವರ ನಾಯ್ಕ 11 ಸಮಸ್ಯೆಗಳನ್ನು ಉಲ್ಲೇಖಿಸಿ ಮನವಿ ಸಲ್ಲಿಸಿದರು.ಮನವಿಯಲ್ಲಿ ಉಲ್ಲೇಖಿಸಿರುವ ಪಟ್ಟಣದ ಸಮಸ್ಯೆಗಳು :• ಎಲ್ಲೆಂದರಲ್ಲಿ ಮೀನು ಮಾರುತ್ತಿರುವುದು• ಜಾತ್ರೆಗೆ ಅಳವಡಿಸಿದ ಅಲಂಕಾರಿಕ ದೀಪಗಳು ಹಾಳಾಗಿರುವುದು• ಜಾತ್ರೆ ನಿಮಿತ್ತ ಬೆಲ್ ರಸ್ತೆ ಮಾಡಿದ್ದು ಸಂಪೂರ್ಣ …
Read More »ಗಣೇಶೋತ್ಸವ ಆಚರಣೆ ನಿಮಿತ್ತ ಯಲ್ಲಾಪುರ ಪೊಲೀಸ್ ಇಲಾಖೆ ಶಾಂತಿ ಸಭೆ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಆಚರಣೆಗಳು ಅಪರಾಧ ವಾಗಬಾರದು ಹಬ್ಬಗಳಿಗೆ ತಕ್ಕನಾದ ಪದ್ದತಿ ಪರಂಪರೆಗಳನುಸಾರ ನಡೆದು ಘನತೆ ಹೆಚ್ಚಿಸುವಂತ ಸಾರ್ಥಕ ಸಾತ್ವಿಕ ಉತ್ಸವಗಳನ್ನು ನಡೆಸುವಂತಾಗಬೇಕಿದೆ. ಡಿಜೆ ಎನ್ನುವುದು ನಮ್ಮ ಸಂಪ್ರದಾಯದ ಭಾಗವಲ್ಲ ಆದರೆ ಅದನ್ನು ಬೇಡ ಎನ್ನುವುದು ನನ್ನ ಉದ್ದೇಶವಲ್ಲ. ದೇಶದ ಸರ್ವೋಚ್ಚ ನ್ಯಾಯಾಲಯದ ಆದೇಶವೆ ಡಿಜೆಗೆ ನಿಷೇದ ಹೇರಿದೆ ಅದರ ಹಣವನ್ನು ಇನ್ನಷ್ಟು ಉತ್ತಮ ಕಾರ್ಯಗಳಿಗೆ ತೊಡಗಿಸುವಂತಾಗಲಿ ಎಂದು …
Read More »ಯಲ್ಲಾಪುರದಲ್ಲಿ ನಡೆದ ಅರಣ್ಯ ಹುತಾತ್ಮರ ದಿನಾಚರಣೆ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ದೇಶದ ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ಸಂರಕ್ಷಣೆಯ ಕಾರ್ಯದಲ್ಲಿ ಪ್ರಾಣ ತ್ಯಾಗ ಮಾಡಿದ ಮಹನೀಯರಿಗೆ ನನ್ನ ನಮನಗಳು. ಮನು ಕುಲದ ಆರೋಗ್ಯಕರ ಜೀವನ ಪರಿಸರ ಸಮತೋಲನ ನೆಮ್ಮದಿಯ ಬದುಕಿಗೆ ದಾರಿಯಾಗಿದೆ ಈ ಕಾರ್ಯದಲ್ಲಿ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬರ ಕರ್ತವ್ಯ ನಿಷ್ಟೆ ಶ್ಲಾಘನೀಯ ಎಂದು ಸಿವಿಲ್ ನ್ಯಾಯಾಧೀಶರಾದ ಲಕ್ಷ್ಮೀ ಬಾಯಿ ಬಸನಗೌಡ ಪಾಟೀಲ್ …
Read More »ಗಣಪತಿ ಸಂಭ್ರಮಕ್ಕು ಸಮಯದ ಕೊರತೆ. ಸಿದ್ದಗೊಂಡ ಮಂಟಪ ಅದಕ್ಕಾಗಿ ಬಂತೇ..??
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಚೌತಿ ಗಣಪನ ಹಬ್ಬಕ್ಕೆ ದಿನಗಣನೆ ಆರಂಭವಾಗುತತಿದ್ದಂತೆ ಗಜಮುಖನ ಆಹ್ವಾನಕ್ಕೆ ಸಕಲ ತಯಾರಿಗಳ ಸಿದ್ಧತೆ, ಅಲಂಕಾರಿಕ ಸಾಮಗ್ರಿಗಳು ಮಾರುಕಟ್ಟೆಗೆ ಬಂದಿದ್ದು ಯಲ್ಲಾಪುರದ ರವಿವಾರ ಸಂತೆಯಲ್ಲಿ ಗಣೇಶನನ್ನು ಕೂರಿಸುವ ರೆಡಿಮೇಡ್ ಮಂಟಪಗಳ ಮಾರಾಟ ಎಲ್ಲರ ಗಮನ ಸೆಳೆಯಿತು. ಹಳಿಯಾಳ ಮೂಲದ ಪ್ರಶಾಂತ ಎಂಬಾತ ಧಾರವಾಡದಲ್ಲಿ ಪೂಜಾ ಮಂಟಪಗಳ ಬಾಡಿಗೆ ನೀಡುವ, ಮಾರಾಟ ಮಾಡುವವನಾಗಿದ್ದು ಕಳೆದ ಮೂರು ವರ್ಷಗಳಿಂದ ಪೂಜಾ …
Read More »ಯಲ್ಲಾಪುರ ತಾಲೂಕಿನಲ್ಲೊಂದು ಕೊಡೈಕೆನಾಲ್ ! ಸೂರ್ಯಕಲ್ಯಾಣಿ ಗುಡ್ಡ..
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಬೆಟ್ಟ ಗುಡ್ಡಗಳು ಹಸಿರನುಟ್ಟು ಮಂಜು ಹೊದ್ದು ಮಲಗಿದಂತಹ ಭಾವ, ನೋಡಿದಷ್ಟೂ ದೂರ ಸೌಂದರ್ಯ ಶಿಖರ, ಗಿರಿಕಾನನ, ಕಂದರ. ತಂಪಾಗಿ ಬೀಸುವ ಗಾಳಿ, ಹಕ್ಕಿ-ಪಿಕ್ಕಿಗಳ ಕಲರವ , ನೋಡಲೆಷ್ಟು ಸುಂದರ “ಸೂರ್ಯಕಲ್ಯಾಣಿ ಗುಡ್ಡ”, ಯಲ್ಲಾಪುರದಲ್ಲೊಂದು ಕೊಡೈಕೆನಾಲ್ ಅನುಭವ. ತಾಲೂಕಿನ ಅತ್ಯಂತ ದೂರದಲ್ಲಿರುವ ಮಾವಿನಮನೆ ಪಂಚಾಯತ ವ್ಯಾಪ್ತಿಯಲ್ಲಿರುವ ಮಲವಳ್ಳಿಯಿಂದ ಒಂದಷ್ಟು ದೂರ ಸಾಗಿದರೆ ಸೂರ್ಯಕಲ್ಯಾಣಿ ಗುಡ್ಡಕ್ಕೆ ಹೋಗುವ …
Read More »ಮುನಿಸೇಕೆ ಮಕ್ಕಳ ಮೇಲೆ ? ಎಚ್ಚೆತ್ತುಕೊಳ್ಳಬೇಕಿದೆ ಕಾರ್ಮಿಕ ಇಲಾಖೆ. ಮುಂದುವರೆಸಬೇಕಿದೆ ಶಿಶುಪಾಲನ ಕೇಂದ್ರದ ಕಲಿಕೆ!!!
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ದಿನ ದುಡಿದು ಬದುಕುವ ಕಾರ್ಮಿಕರ ಮಕ್ಕಳಿಗೆ ವರದಾನವಾಗಿ ಪುಟಾಣಿ ಮಕ್ಕಳ ನೆಚ್ಚಿನ ತಾಣವಾಗಿ ಗುರುತಿಸಿಕೊಂಡಿದ್ದ ಕಾರ್ಮಿಕ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಯಲ್ಲಾಪುರದ ಎರಡು ಶಿಶುಪಾಲನ ಕೇಂದ್ರಗಳು ಸದ್ದಿಲ್ಲದೆ ಮುಚ್ಚುವ ಹುನ್ನಾರ ನಡೆದಿದೆ ಏನೋ ಎಂಬ ಬಲವಾದ ಅನುಮಾನ ಕಾರ್ಮಿಕ ವಲಯದಲ್ಲಿ ಕೇಳಿ ಬರುತ್ತಿದೆ. ಇಂತಹ ಗಂಭೀರವಾದ ಅನುಮಾನ ಮೂಡಲು ಪ್ರಮುಖ ಕಾರಣ …
Read More »ಯಲ್ಲಾಪುರದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಗುರು ಗೌರವಾರ್ಪಣೆ ಕಾರ್ಯಕ್ರಮ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ದೇವರ ಸ್ಥಾನದಲ್ಲಿ ಕಾಣುವ ಅತ್ಯಂತ ಪರಮ ಪವಿತ್ರ ವೃತ್ತಿ ಶಿಕ್ಷಕ ವೃತ್ತಿಯಾಗಿದೆ. ಡಾಕ್ಟರ್, ವಕೀಲರು,ವಿಜ್ಞಾನಿಗಳು,ಇಂಜನಿರ್, ಉಪನ್ಯಾಸಕ ಇತರೆ ಯಾವುದೇ ಸ್ಥಾನ ಹೊಂದಲು ಮೂಲ ಕಾರಣ ಮೊದಲು ಶಿಕ್ಷಕ. ವಿಶೇಷವಾಗಿ ನನ್ನ ಕ್ಷೇತ್ರದಲ್ಲಿ ದೇವ ದುರ್ಲಭ ಶಿಕ್ಷಕರಿರುವುದು ಹೆಮ್ಮೆಯ ಸಂಗತಿಯಾಗಿದೆ. ದಿವಂಗತ ಮಾಜಿ ರಾಷ್ಟ್ರಪತಿ ಡಾ,ಸರ್ವಪಲ್ಲಿ ರಾಧಾಕೃಷ್ಣ ಅವರ ಆದರ್ಶಗಳನ್ನು ಅಳವಡಿಸಿಕೊಂಡು ಮತ್ತಷ್ಟು ಸಂಸ್ಕಾರವಂತ ಪ್ರಜೆಗಳನ್ನು …
Read More »