Breaking News

Monthly Archives: April 2023

ನಿವೃತ್ತ ಉದ್ಯೋಗಿಗಳಿಂದ ನಿಧಿ ಸಮರ್ಪಣೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ. ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಮಂಚಿಕೇರಿಯ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ನಿವೃತ್ತ ಶಿಕ್ಷಕ ಮತ್ತು ಶಿಕ್ಷಕೇತರ ಉದ್ಯೋಗಿಗಳು ತಾವು ದುಡಿದ ಸಂಸ್ಥೆಗೆ ಎರಡು ಲಕ್ಷ ಇಪ್ಪತೈದು ಸಾವಿರದ ಎರಡು ನೂರಾ ಇಪ್ಪತೈದು ರೂಪಾಯಿಗಳ(2,25,225) ನಿಧಿಯನ್ನು ಸಮರ್ಪಿಸಿದರು.ಈ ನಿಧಿಯನ್ನು ಖಾಯಂ ಠೇವಣಿಯಾಗಿ ಆರ್ಥಿಕ ಸಂಸ್ಥೆಯಲ್ಲಿ ಇಡಬೇಕೆಂದು ಇಚ್ಛಿಸಲಾಗಿದ್ದು, ಇದರಿಂದ ಬರುವ ಬಡ್ಡಿಯನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಉಪಯೋಗಿಸಲು ಕೋರಲಾಗಿದೆ. ಎಸ್.ಎಸ್.ಎಲ್.ಸಿ.ಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ …

Read More »

ಮದನೂರು ಪಂಚಾಯತ್ ವ್ಯಾಪ್ತಿಯಲ್ಲಿ ಸಚಿವ ಹೆಬ್ಬಾರ್ ಕಾರ್ಯಕರ್ತರ ಸಭೆ

ಯಲ್ಲಾಪುರ, ಏಪ್ರಿಲ್‌ 12 : ಮಾನ್ಯ ಕಾರ್ಮಿಕ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ್‌ ಅವರು, ಇಂದು ಯಲ್ಲಾಪುರ ತಾಲೂಕಿನ ಮದನೂರ ಗ್ರಾಮ ಪಂಚಾಯತ ವ್ಯಾಪ್ತಿಯ ಹುಲಗೊಡ ಗ್ರಾಮದಲ್ಲಿ ಕಾರ್ಯಕರ್ತರ ಸಭೆ ನಡೆಸಿದರು. ಈ ಸಭೆಯಲ್ಲಿ ಮಹಾಶಕ್ತಿಕೇಂದ್ರದ ಅಧ್ಯಕ್ಷರು, ಶಕ್ತಿಕೇಂದ್ರದ ಅಧ್ಯಕ್ಷರು, ಬೂತ್‌ ಅಧ್ಯಕ್ಷರು, ಪಕ್ಷದ ವಿವಿಧಸ್ತರದ ಪದಾಧಿಕಾರಿಗಳು, ಸ್ಥಳೀಯ ಪ್ರಮುಖರು, ಗ್ರಾಮ ಪಂಚಾಯಿತಿ ಸದಸ್ಯರು, ವಿವಿಧ ಮೋರ್ಚಾದ ಪದಾಧಿಕಾರಿಗಳು, ಶಕ್ತಿಕೇಂದ್ರದ ಪ್ರಮುಖರು ಉಪಸ್ಥಿತರಿದ್ದರು.

Read More »

ಕಣ್ಣಿಗೇರಿ ಮತ್ತು ಕಿರವತ್ತಿಯಲ್ಲಿ ಸಚಿವ ಹೆಬ್ಬಾರ್ ರಿಂದ ಕಾರ್ಯಕರ್ತರ ಸಭೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಯಲ್ಲಾಪುರ, ಏಪ್ರಿಲ್‌ 12 : ಮಾನ್ಯ ಕಾರ್ಮಿಕ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ್‌ ಅವರು, ಇಂದು ಯಲ್ಲಾಪುರ ತಾಲೂಕಿನ ಕಣ್ಣಿಗೇರಿ ಹಾಗೂ ಕಿರವತ್ತಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಸಚಿವರು, ಭಾರತೀಯ ಜನತಾ ಪಕ್ಷಕ್ಕೆ ಬೇರೆ ಬೇರೆ ಪಕ್ಷದ ಕಾರ್ಯಕರ್ತರು ಸೇರ್ಪಡೆಯಾಗುತ್ತಿದ್ದಾರೆ. ಬಿಜೆಪಿ ಮೇಲಿನ ಅವರ ವಿಶ್ವಾಸಕ್ಕೆ ಆಭಾರಿಯಾಗಿದ್ದೇನೆ. ಕ್ಷೇತ್ರದಾದ್ಯಂತ ಬಿಜೆಪಿ ಪರವಾದ ಅಲೆ …

Read More »

ಹಾಸಣಗಿ ಮತ್ತು ಕಂಪ್ಲಿ ಕಾರ್ಯಕರ್ತರ ಸಭೆ ನಡೆಸಿದ ಸಚಿವ ಹೆಬ್ಬಾರ್

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಯಲ್ಲಾಪುರ, ಏಪ್ರಿಲ್‌ 12 : ಮಾನ್ಯ ಕಾರ್ಮಿಕ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ್‌ ಅವರು, ಇಂದು ಯಲ್ಲಾಪುರ ತಾಲೂಕಿನ ಹಾಸಣಗಿ ಹಾಗೂ ಕಂಪ್ಲಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಸಚಿವರು, ಮತ್ತೊಮ್ಮೆ ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ಪಕ್ಷ ನನಗೆ ಟಿಕೆಟ್‌ ನೀಡಿದೆ. ಇದಕ್ಕಾಗಿ ಪಕ್ಷದ ನಾಯಕರು, ಕಾರ್ಯಕರ್ತರು, ಎಲ್ಲ ಸ್ತರದ ಮುಖಂಡರು, ಮತದಾರರು ಹಾಗೂ …

Read More »

NPCIL ಕೈಗಾ ನಿಗಮ ಸಾಮಾಜಿಕ ಜವಾಬ್ದಾರಿ ಯೋಜನೆಯ ಕಾಮಗಾರಿ ಕಳಪೆ-ಕ್ರಮಕ್ಕೆ ಆಗ್ರಹ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ: NPCIL ಕೈಗಾದವರು ನಿಗಮ ಸಾಮಾಜಿಕ ಜವಾಬ್ದಾರಿ ಯೋಜನೆ ಅಡಿಯಲ್ಲಿ ಮಾವಿನಮನೆ ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆ,ಸಮುದಾಯ ಭವನ,ಶಾಲೆ,ಬ್ರಿಜ್ ಮುಂತಾದ ಕಾಮಗಾರಿಯನ್ನು ಮಾವಿನಮನೆ ಪಂಚಾಯತ್ ವ್ಯಾಪ್ತಿಯಲ್ಲಿ ಕೈಗೊಂಡಿದ್ದು ಕಳೆದ ಹಲವಾರು ವರ್ಷಗಳಿಂದ ಕೆಲಸಗಳನ್ನು ಅತ್ಯುತ್ತಮ ಗುಣಮಟ್ಟದ ಕಾಮಗಾರಿಗಳನ್ನು ನಿರ್ವಹಿಸುತ್ತಾ ಬಂದಿದ್ದಾರೆ. ಈ ಸಾಲಿನಲ್ಲಿ ಮಲವಳ್ಳಿ ಬಂಕೊಳ್ಳಿ ಕಾಂಕ್ರೇಟ್ ರಸ್ತೆ ಕಾಮಗಾರಿಯನ್ನು NPCIL ಕೈಗಾರವರು ನಿರ್ವಹಿಸುತ್ತಿದ್ದು ಸಂಬಂಧಪಟ್ಟ ಇಂಜಿನೀಯರ್ ಗಳು ಸರಿಯಾಗಿ ಸ್ಥಳಪರಿಶೀಲಿಸದೆ …

Read More »

ಅಧಿಕಾರವಿರಲಿ ಇಲ್ಲದಿರಲಿ ಹೆಬ್ಬಾರ್ ಜನಪ್ರಿಯತೆಗೇನೂ ಅಡ್ಡಿಯಿಲ್ಲ!!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಯಾವುದೇ ಸರ್ಕಾರಿ ಕೆಲಸ ಕಾರ್ಯಗಳು ಮಂತ್ರಿ ಗಳಿಂದ, ಶಾಸಕರಿಂದ ಆಗುವಂತಹ ಸನ್ನಿವೇಶಗಳೇ ಇಲ್ಲ. ಆದರೂ ಹೆಬ್ಬಾರ್ ಅವರ ಮನೆ ಮುಂದೆ ಸದಾ ಜನಸಂದಣಿಯಿಂದ ತುಂಬಿರುತ್ತದೆ. ಅಧಿಕಾರವಿರಲಿ,ಇಲ್ಲದಿರಲಿ ಹೆಬ್ಬಾರ್ ಸದಾ ಜನರ ಮಧ್ಯೆ ಇರುವಂತಹ ವ್ಯಕ್ತಿತ್ವದವರು. ಚುನಾವಣೆಯ ಹೊಸ್ತಿಲಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಹಳ್ಳಿ ಹಳ್ಳಿಗಳಿಗಳಲ್ಲಿ ಕಾರ್ಯಕರ್ತರ …

Read More »

ಮಿರಾಶಿ ಕುಟುಂಬದ ಆಯೋಜನೆಯಲ್ಲಿ ” ಯುವ ಸಂವಾದ”  ಹೆಬ್ಬಾರರೊಂದಿಗೆ
      

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಅಭಿವೃದ್ಧಿಗೆ ಪೂರಕವಾದ ಅಂಶಗಳ ಕಡೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು ಆರ್ಥಿಕ ವಹಿವಾಟಿನ ಉನ್ನತೀಕರಣಕ್ಕಾಗಿ ಉದ್ಯಮಗಳ ಸ್ಥಾಪನೆ ಅನಿವಾರ್ಯವಾಗಿದೆ. ಆದರೆ ಪರಿಸರಕ್ಕೆ ಪೂರಕವಾದ ಅರಣ್ಯ ಪ್ರದೇಶ ಉದ್ಯಮಗಳ ಸ್ಥಾಪನೆಗೆ ಮಾರಕವಾಗಿದೆ. ಇದರಿಂದ ತಾಲೂಕಿನ ವಿದ್ಯಾವಂತ ಯುವಕರು ನಗರಪ್ರದೇಶಗಳಿಗೆ ವಲಸೆ ಹೋಗಿ ಅಲ್ಪ ಸ್ವಲ್ಪ ವರಮಾನಕ್ಕೆ ದುಡಿಮೆ ಮಾಡುವಂತಹ ಸ್ಥಿತಿ ಬಂದೊದಗಿದೆ. ಇಂತಹ ವ್ಯವಸ್ಥೆಯ ಬದಲಾವಣೆಗೆ ಪ್ರಾಮಾಣಿಕ ಪ್ರಯತ್ನ …

Read More »

ವಿಶು ಸಂಭ್ರಮಕ್ಕೆ ಯಲ್ಲಾಪುರದಲ್ಲಿ ಅಯ್ಯಪ್ಪ ಸ್ವಾಮಿ ವಿಶೇಷ ಪೂಜೆ ಅನ್ನ ಪ್ರಸಾದ ವಿತರಣೆ

ಪ್ರತಿಧ್ವನಿ,ಯಲ್ಲಾಪುರ: ಕಲಿಯುಗ ವರದ ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ವರ್ಷದಲ್ಲಿ ಮಕರ ಸಂಕ್ರಾತಿ ಎಷ್ಟು ಶ್ರೇಷ್ಟವೊ ಅಷ್ಟೆ ಶ್ರೇಷ್ಠ ವಿಶು ಪೂಜಾ ಕಾರ್ಯವಾಗಿದೆ. ಇದು ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ಬರಲಿದ್ದು ಯಲ್ಲಾಪುರದಲ್ಲಿ ಜೋಡುಕೆರೆ ಮಣಿಕಂಠ ಸನ್ನಿದಾನದಲ್ಲಿ ವಿಶು ಸಂದರ್ಭದ ಅಯ್ಯಪ್ಪ ದರ್ಶನಕ್ಕಾಗಿ ಕೆಲವು ಭಕ್ತರು ಮಾಲಾಧಾರಣೆ ಮಾಡಿದ್ದು ವೃತ ಪೂಜೆಯನ್ನು ಅತ್ಯಂತ ಶ್ರದ್ದಾಭಕ್ತಿಯಿಂದ ನೆರವೇರಿಸಿದರು. ಸನ್ನಿದಾನದಲ್ಲಿ ನಡೆದ ವಿಶೇಷ ಪಡಿ ಪೂಜಾ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಭಕ್ತಾದಿಗಳಿಗೆ ಅನ್ನಪ್ರಸಾದ ವಿತರಣೆಯನ್ನು …

Read More »

ಯಲ್ಲಾಪುರ ಪೊಲೀಸರ ಮಿಂಚಿನ ಕಾರ್ಯಾಚರಣೆ ಇನ್ನೋವಾ ಕಾರು ಕಳ್ಳತನ ಮಾಡಿದ ಮೂವರು ಆರೋಪಿಗಳ ಬಂಧನ

ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಶಾರದಾಗಲ್ಲಿಯ ಮನೆಯೊಂದರ ಮುಂದೆ ನಿಲ್ಲಿಸಿದ್ದ ಅಂದಾಜು 4,50,000 ಮೌಲ್ಯದ ಇನ್ನೋವಾ ಕಾರನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ ಮೂವರು ಆರೋಪಿಗಳನ್ನು ಮಂಗಳೂರಿನ ಕಂಕನಾಡಿಯಲ್ಲಿ ಯಲ್ಲಾಪುರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.ಪಟ್ಟಣದ ಶಾರದಾ ಗಲ್ಲಿಯ ನಿವಾಸಿ ಮಹ್ಮದ್ ಶೇಖ್ ಎಂಬುವರು ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ ಕಾರು ಕಳ್ಳತನವಾಗಿರುವ ಕುರಿತು ಯಲ್ಲಾಪುರ ಠಾಣೆಯಲ್ಲಿ ಏ.4 ರಂದು ದೂರು ಸಲ್ಲಿಸಿದ್ದರು.ಪ್ರಕರಣದ ಬೆನ್ನತ್ತಿದ ಪೊಲೀಸರು ಖಚಿತ ಮಾಹಿತಿಯನ್ನಾಧರಿಸಿ ಏ. 8 ರಂದು …

Read More »

ಕೈತೋಟ ಅಂದು ಇಂದು
( ಹಸಿರೇ ಉಸಿರು)

ಪ್ರತಿಧ್ವನಿ ಅತಿಥಿ ಬರಹದಲ್ಲಿ ಶ್ರೀ ಮಧುಕೇಶವ ಭಾಗ್ವತ ಯಲ್ಲಾಪುರ ಮನೆಯಲ್ಲಿ ಸಂತೋಷ, ನೆಮ್ಮದಿ, ಆರೋಗ್ಯ ಸದಾ ನೆಲೆಸಿರಬೇಕೆಂದರೆ ಆ ಮನೆಯ ಮುಂದೊಂದು ಸಮೃದ್ಧಿ ಹೊಂದಿದ ಕೈತೋಟ ಇರಲೇಬೇಕು. ಅದು ಹೂವಿನ ಗಿಡಕ್ಕೆ ಮಾತ್ರ ಸೀಮಿತವಾಗದೇ ವಿವಿಧ ರೀತಿಯ ಸೊಪ್ಪು ತರಕಾರಿ ಬೆಳೆಯುವಂತಿದ್ದರೆ ಅಂತಹ ಮನೆಯಲ್ಲಿ ಆರೋಗ್ಯ, ಆನಂದ ಸದಾ ನೆಲೆಸಿರುತ್ತದೆ. ಹಿಂದೆಲ್ಲ ಪ್ರತೀ ಮನೆಗೊಂದು ಕೈತೋಟ ಇದ್ದೇ ಇರುತ್ತಿತ್ತು. ಹಾಗೂ ಬಹುತೇಕ ಎಲ್ಲರ ಮನೆಯಲ್ಲ ಗೋಸಾಕಣೆ ಇರುವುದರಿಂದ ಗೊಬ್ಬರ ಸಿಗುವುದರಿಂದ …

Read More »